ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಾಗತಿಕ ಮಟ್ಟದಲ್ಲಿ ನಾವೀನ್ಯತೆ ಮತ್ತು ತಂತ್ರಜ್ಞಾನದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿರುವ ಕರ್ನಾಟಕ, ವಿಶ್ವದ 'ಗ್ಲೋಬಲ್ ಕ್ಯಾಪಬಿಲಿಟಿ ಸೆಂಟರ್' (GCC) ರಾಜಧಾನಿಯಾಗಿ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ. ಇತ್ತೀಚೆಗೆ ನಡೆದ 'ಕ್ಯಾಟಲಿಸ್ಟ್ ಕನೆಕ್ಟ್' (Katalyst Connect) ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಜಿಸಿಸಿ ನಾಯಕರೊಂದಿಗೆ ರಾಜ್ಯದ ಮುಂದಿನ ಬೆಳವಣಿಗೆಯ ಕುರಿತು ಮಹತ್ವದ ಚರ್ಚೆ ನಡೆಸಲಾಯಿತು.
ಈ ಕಾರ್ಯತಂತ್ರದ ಸಮಾಲೋಚನೆಗೆ ಮುನ್ನ, ಬೆಂಗಳೂರಿನಲ್ಲಿರುವ 'ಟಾರ್ಗೆಟ್ ಇನ್ ಇಂಡಿಯಾ' ಕ್ಯಾಂಪಸ್ಗೆ ಭೇಟಿ ನೀಡಿ, ಅಲ್ಲಿನ ನಾಯಕತ್ವದೊಂದಿಗೆ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI), ಮತ್ತು ಹಣಕಾಸು ವಲಯಗಳಲ್ಲಿ ಕರ್ನಾಟಕದಿಂದ ಜಾಗತಿಕ ಮಟ್ಟಕ್ಕೆ ಬಿಲ್ಡ್ ಆಗುತ್ತಿರುವ ಸಾಮರ್ಥ್ಯಗಳ ಕುರಿತು ಒಳನೋಟಗಳನ್ನು ಪಡೆದುಕೊಳ್ಳಲಾಯಿತು.
ಜಿಸಿಸಿಗಳ ಹೆಡ್ಕ್ವಾರ್ಟರ್ಸ್: ಪ್ರಸ್ತುತ ಕರ್ನಾಟಕವು 1,100 ಕ್ಕೂ ಹೆಚ್ಚು ಜಿಸಿಸಿಗಳಿಗೆ ನೆಲೆಯಾಗಿದ್ದು, ನಾವೀನ್ಯತೆ ಮತ್ತು ಉದ್ಯಮಶೀಲತೆಯ ಜಾಗತಿಕ ಹಬ್ ಆಗಿದೆ.
AI ಉದ್ಯಮದಲ್ಲಿ ಮುಂಚೂಣಿ: ಭಾರತದ ಒಟ್ಟು ಚಿಲ್ಲರೆ ವ್ಯಾಪಾರ ಜಿಸಿಸಿ ಎಐ ಪ್ರತಿಭೆಗಳಲ್ಲಿ ಶೇಕಡಾ 30.6 ರಷ್ಟು ಪಾಲು ಹೊಂದುವ ಮೂಲಕ ಕರ್ನಾಟಕವು ದೇಶದ ಎಐ ಆರ್ಥಿಕತೆಯನ್ನು ಮುನ್ನಡೆಸುತ್ತಿದೆ.
ಭವಿಷ್ಯದ ಮಹತ್ವಾಕಾಂಕ್ಷಿ ಗುರಿ (2029ರ ವೇಳೆಗೆ):
500 ಹೊಸ ಜಿಸಿಸಿಗಳನ್ನು ರಾಜ್ಯಕ್ಕೆ ಆಕರ್ಷಿಸುವುದು.
3.5 ಲಕ್ಷ ಉನ್ನತ ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸುವುದು.
50 ಬಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕ ಉತ್ಪಾದನೆಯನ್ನು ಗಳಿಸುವುದು.
"ನಾವೀನ್ಯತೆ ಬೆಳೆಯುವ, ಉದ್ಯಮಗಳು ವಿಶ್ವಾಸದಿಂದ ಹೂಡಿಕೆ ಮಾಡುವ ಮತ್ತು ಪ್ರತಿಯೊಬ್ಬ ಯುವ ಕನ್ನಡಿಗನಿಗೆ ವಿಶ್ವದರ್ಜೆಯ ಅವಕಾಶಗಳು ಸಿಗುವಂತಹ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಕರ್ನಾಟಕದಿಂದ ಜಾಗತಿಕ ಮಟ್ಟಕ್ಕೆ ಎಐ, ತಂತ್ರಜ್ಞಾನ ಮತ್ತು ಉನ್ನತ ಮೌಲ್ಯದ ಉದ್ಯೋಗಗಳ ಭವಿಷ್ಯವನ್ನು ನಾವು ಒಟ್ಟಾಗಿ ರೂಪಿಸಲಿದ್ದೇವೆ."
ಈ ಮಹತ್ವದ ಸಮಾಲೋಚನಾ ಸಭೆಯಲ್ಲಿ ಮಾನ್ಯ ಐಟಿ-ಬಿಟಿ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಎಂ. ಖರ್ಗೆ, ಮುಖ್ಯಮಂತ್ರಿಯವರ ಹಣಕಾಸು ಸಲಹೆಗಾರ ಎಲ್.ಕೆ. ಅತೀಕ್, ಐಟಿ-ಬಿಟಿ ಇಲಾಖೆಯ ಕಾರ್ಯದರ್ಶಿ ಡಾ. ಎನ್. ಮಂಜುಳಾ ಹಾಗೂ ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.



