Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

‘ಕಲ್ಲಿನ ಕೋಟೆ ಕಾವ್ಯೋತ್ಸವ’ ವೈಭವ: ಆರು ಪ್ರಮುಖ ಕೃತಿಗಳ ಲೋಕಾರ್ಪಣೆ, ಕವಿಗೋಷ್ಠಿ ಯಶಸ್ವಿ!

Advertisement
Advertisement

ಚಂದ್ರವಳ್ಳಿ ನ್ಯೂಸ್,ಚಿತ್ರದುರ್ಗ:
ಕೋಟಿ ನಾಡಿನ ಐತಿಹಾಸಿಕ ಕಲ್ಲಿನ ಕೋಟೆಯ ನಗರಿ ಚಿತ್ರದುರ್ಗದಲ್ಲಿ ಸಾಹಿತ್ಯಾಸಕ್ತರು ಹಾಗೂ ಕವಿಗಳ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿದ್ದ
ಕಲ್ಲಿನ ಕೋಟೆ ಕಾವ್ಯೋತ್ಸವ ಹಾಗೂ ಪುಸ್ತಕಗಳ ಲೋಕಾರ್ಪಣೆಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಸಾಹಿತ್ಯ, ಕಾವ್ಯ ಮತ್ತು ಪುಸ್ತಕ ಪ್ರಕಾಶನಕ್ಕೆ ಹೊಸ ಚೈತನ್ಯ ನೀಡುವ ಮಹತ್ವದ ವೇದಿಕೆಯಾಗಿ ಈ ಕಾರ್ಯಕ್ರಮ ಮೂಡಿಬಂದಿತು.

ಕನ್ನಡ ಸಾಹಿತ್ಯಕ್ಕೆ ಅನ್ಯಭಾಷಿಕರ ಕೊಡುಗೆ ಶ್ಲಾಘನೀಯ:
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತ್ರಿವರ್ಣ ಫೌಂಡೇಶನ್ ಅಧ್ಯಕ್ಷರು ಹಾಗೂ ದ್ವಿಭಾಷಾ ಕವಿಗಳಾದ  ಪೊಟ್ಟೂರಿ ಹರಿಕೃಷ್ಣ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು
, 

"ಯುವ ಕವಿಗಳಿಗೆ ಮತ್ತು ಹೊಸ ಬರಹಗಾರರಿಗೆ ಉತ್ತೇಜನ ನೀಡುವ ಮಹತ್ವಾಕಾಂಕ್ಷೆಯಿಂದ ನಮ್ಮ ಪ್ರಕಾಶನದ ಮೂಲಕ ಇದುವರೆಗೆ 75ಕ್ಕೂ ಹೆಚ್ಚು ಕನ್ನಡ ಪುಸ್ತಕಗಳನ್ನು ಪ್ರಕಟಿಸಿ ಲೋಕಾರ್ಪಣೆಗೊಳಿಸಲಾಗಿದೆ" ಎಂದು ಹೆಮ್ಮೆಯಿಂದ ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ. ಶಿವಸ್ವಾಮಿ ಅವರು, ಮೂಲತಃ ಆಂಧ್ರಪ್ರದೇಶದವರಾಗಿದ್ದರೂ ಕನ್ನಡದ ಮೇಲಿನ ಪ್ರೀತಿಯಿಂದ ಇಲ್ಲಿನ ಕವಿಗಳಿಗೆ ಪುಸ್ತಕ ಪ್ರಕಟಣೆಯ ಮೂಲಕ ಬೆನ್ನೆಲುಬಾಗಿ ನಿಂತಿರುವ ಹರಿಕೃಷ್ಣ ಅವರ ಪ್ರೋತ್ಸಾಹವನ್ನು ಮುಕ್ತಕಂಠದಿಂದ ಶ್ಲಾಘಿಸಿ, ಅಭಿನಂದಿಸಿದರು.

ಸಾಹಿತ್ಯ ಪರಿಷತ್ ಅಧ್ಯಕ್ಷರ ಬೆಂಬಲ:
ಮುಖ್ಯ ಅತಿಥಿಯಾಗಿದ್ದ ದಾವಣಗೆರೆ ಜಿಲ್ಲಾ ಕಸಾಪ ಅಧ್ಯಕ್ಷ ವಾಮದೇವಪ್ಪ ಅವರು ಮಾತನಾಡಿ
, "ದಾವಣಗೆರೆಯಲ್ಲೂ ಇದೇ ಮಾದರಿಯ ಕಾವ್ಯೋತ್ಸವ ನಡೆಸಿ ಏಳು ಪುಸ್ತಕಗಳನ್ನು ಬಿಡುಗಡೆ ಮಾಡಿದ್ದ ನೆನಪು ಹಸಿರಾಗಿದೆ" ಎಂದು ಸಂತಸ ಹಂಚಿಕೊಂಡರು.

 ಮುಖ್ಯ ಅತಿಥಿ, ಚಿಕ್ಕಮಗಳೂರು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ ಅವರು, ಮುಂದಿನ ದಿನಗಳಲ್ಲಿ ಕಾವ್ಯದ ತವರೂರು ಶೃಂಗೇರಿಯಲ್ಲೂ ಇದೇ ಮಾದರಿಯ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸುವಂತೆ ಹರಿಕೃಷ್ಣ ಅವರಿಗೆ ಆಹ್ವಾನ ಹಾಗೂ ಪ್ರೋತ್ಸಾಹ ನೀಡಿದರು.

ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರು ಹಾಗೂ ಬಾಪೂಜಿ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ. ಕೆ.ಎಂ. ವೀರೇಶ್ ಅವರು ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಸಂಸ್ಥೆಯ ಎಲ್ಲಾ ಸಾಹಿತ್ಯಿಕ ಚಟುವಟಿಕೆಗಳಿಗೂ ತಮ್ಮ ಸಂಪೂರ್ಣ ಸಹಕಾರ ಇರಲಿದೆ ಎಂದು ಭರವಸೆ ನೀಡಿದರು.

ಸೆಪ್ಟೆಂಬರ್ 6 ರಂದು 10ನೇ ಸಾಹಿತ್ಯ ಸಮ್ಮೇಳನ:
ವಿಶ್ವ ಕನ್ನಡ ಕಲಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಬಿಬಿಎಂಪಿ ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಈ. ರವೀಶ ಅಕ್ಕರ ಅವರು ಮಾತನಾಡಿ
, "ವೇದಿಕೆಯಲ್ಲಿರುವ ಎಲ್ಲಾ ಹಿರಿಯರು ಅದ್ಭುತ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅವರ ಮುಂದೆ ನಾನು ಕಿರಿಯವನು. ಮುಂಬರುವ ಸೆಪ್ಟೆಂಬರ್ 6ರಂದು ನಮ್ಮ ಸಂಸ್ಥೆಯ ವತಿಯಿಂದ 10ನೇ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ" ಎಂದು ಪ್ರಕಟಿಸಿದರು.

ಲೋಕಾರ್ಪಣೆಗೊಂಡ ಆರು ಪ್ರಮುಖ ಕೃತಿಗಳು:
ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ ಈ ಕೆಳಗಿನ ಆರು ವೈವಿಧ್ಯಮಯ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

ರೈತ ದೇವೋಭವ – (ಸಂಪಾದಕರು: ಕಲಾ ರತ್ನ ಪೊಟ್ಟೂರಿ ಹರಿಕೃಷ್ಣ ಮತ್ತು ನಿಶಾ ಮುಳಗುಂದ).
ಮಳೆ ಬಿಲ್ಲು
ಡಾ. ಲೀಲಾ ಗುರುರಾಜ್.
ಸಪ್ತವರ್ಣ
ಸುಕನ್ಯಾ ವಿ.
ವಾಸ್ತವ
ದಿವಂಗತ ಸಿ.ಹೆಚ್. ರಾಜ್
ಬಯಲು ಸಿರಿ
ಶಾಂತ ಕುಮಾರ್
ಗೆಳತಿಗೆ ಬರೆಯುವ ಪತ್ರಗಳು
ಸಿದ್ದೇಶ್ ಸಿದ್ದನಮಠ

ಈ ಕೃತಿಗಳನ್ನು ಕೆ.ಎಂ. ಶಿವಸ್ವಾಮಿ, ವಾಮದೇವಪ್ಪ, ಸೂರಿ ಶ್ರೀನಿವಾಸ, ಡಾ. ಕೆ.ಎಂ. ವೀರೇಶ್, ನಿರ್ಮಲ ಮರಡಿಹಳ್ಳಿ, ಸಿದ್ದೇಶ್ ಸಿದ್ದನಮಠ, ದಯಾ ಪುತ್ತೂರ್ಕರ್ ಮತ್ತು ಈ. ರವೀಶ ಅಕ್ಕರ ಅವರು ಜಂಟಿಯಾಗಿ ಲೋಕಾರ್ಪಣೆಗೊಳಿಸಿದರು.

ಕವಿಗೋಷ್ಠಿ ಮತ್ತು ಉಪಸ್ಥಿತಿ:
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ನಡೆದ ಕವಿಗೋಷ್ಠಿಯಲ್ಲಿ
28ಕ್ಕೂ ಹೆಚ್ಚು ಕವಿಗಳು ಪಾಲ್ಗೊಂಡು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿ ಸಾಹಿತ್ಯ ಪ್ರೇಮಿಗಳ ಮನಗೆದ್ದರು. ವೇದಿಕೆಯಲ್ಲಿ ಪ್ರಮುಖ ಸಾಹಿತಿಗಳಾದ ನಿರ್ಮಲ ಮರಡಿಹಳ್ಳಿ, ಸಿದ್ದೇಶ್ ಸಿದ್ದನಮಠ, ದಯಾ ಪುತ್ತೂರ್ಕರ್ ಉಪಸ್ಥಿತರಿದ್ದು ಕಾರ್ಯಕ್ರಮದ ಚಂದವನ್ನು ಹೆಚ್ಚಿಸಿದ್ದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.