ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಸರಸ್ವತಿ ಕಾನೂನು ಮಹಾ ವಿದ್ಯಾಲಯ ಚಿತ್ರದುರ್ಗ ಮತ್ತು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಇವುಗಳ ಸಹಯೋಗದೊಂದಿಗೆ ನಗರದಲ್ಲಿ ನಡೆದ ಅಂತರ್ ಮಹಾ ವಿದ್ಯಾಲಯಗಳ ಹೊನಲು ಬೆಳಕಿನ ಪುರುಷರ ಕಬ್ಬಡಿ ಪಂದ್ಯಾವಳಿಯಲ್ಲಿ ಹುಬ್ಬಳ್ಳಿಯ ಜಿ.ಕೆ. ಕಾನೂನು ಕಾಲೇಜು ಪ್ರಥಮ ಬಹುಮಾನ ಪಡೆದುಕೊಂಡಿತು.
ಮೈಸೂರಿನ ವಿದ್ಯಾವರ್ಧಕ ಲಾ ಕಾಲೇಜು ವಿದ್ಯಾರ್ಥಿಗಳು ಎರಡನೆ ಬಹುಮಾನಕ್ಕೆ ತೃಪ್ತಿಪಟ್ಟುಕೊಂಡರೆ ಹುಬ್ಬಳ್ಳಿಯ ಕೆ.ಎಸ್.ಎಲ್.ಯು. ಲಾ ಸ್ಕೂಲ್ನ ವಿದ್ಯಾರ್ಥಿಗಳು ಮೂರನೆ ಬಹುಮಾನವನ್ನು ತಮ್ಮದಾಗಿಸಿಕೊಂಡರು. ಎಂ.ಇ.ಎಸ್.ಲಾ ಕಾಲೇಜು ಸಿರಸಿಯ ವಿದ್ಯಾರ್ಥಿಗಳು ನಾಲ್ಕನೆ ಬಹುಮಾನ ಪಡೆದುಕೊಂಡರು.
ಮೈಸೂರು ವಿದ್ಯಾವರ್ಧಕ ಲಾ ಕಾಲೇಜಿನ ಕಾರ್ತಿಕ್ ಬೆಸ್ಟ್ ರೈಡರ್, ಜಿ.ಕೆ. ಲಾ ಕಾಲೇಜು ಹುಬ್ಬಳ್ಳಿಯ ಕಾರ್ತಿಕ್ ಬೆಸ್ಟ್ ಕ್ಯಾಚರ್, ಬೆಸ್ಟ್ ಆಲ್ ರೌಂಡರ್ ಆಗಿ ಸಿರಸಿಯ ಕೆಪಿಎಂಇಎಸ್ ಕಾಲೇಜಿನ ದರ್ಶನ್ ಇವರುಗಳು ಹೊರಹೊಮ್ಮಿದರು.


