LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಿರಿಯೂರು ತಾಲೂಕಿನ ಗ್ರಾಪಂಗಳ ಮರುವಿಂಗಡಣೆ ಹಾಗೂ ಮೀಸಲಾತಿ ನಿಗದಿ

Advertisement
Advertisement

ಎಂ.ಎಲ್ ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ (ವಾರ್ಡ್‌ಗಳ) ಮರುವಿಂಗಡಣೆ ಹಾಗೂ ಮೀಸಲಾತಿ ನಿಗದಿಪಡಿಸಿ ಜಿಲ್ಲಾಧಿಕಾರಿಗಳು ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ. 

​ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ಅಧಿನಿಯಮ 1993ರ ಅನ್ವಯ, ಚಿತ್ರದುರ್ಗ ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಅವರು ಈ ಆದೇಶ ಜಾರಿಗೊಳಿಸಿದ್ದು, ಹಿರಿಯೂರು ತಾಲೂಕಿನ ಪ್ರಮುಖ ಗ್ರಾಮ ಪಂಚಾಯಿತಿಗಳ ಕ್ಷೇತ್ರ ವ್ಯಾಪ್ತಿ ಮತ್ತು ಹಂಚಿಕೆಯಾದ ಒಟ್ಟು ಸ್ಥಾನಗಳ ವಿವರವನ್ನು ಜಿಲ್ಲಾಧಿಕಾರಿಗಳು ತಮ್ಮ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ. 

​ಪ್ರಮುಖ ಗ್ರಾಮ ಪಂಚಾಯಿತಿಗಳ ಕ್ಷೇತ್ರ ಹಾಗೂ ಸ್ಥಾನಗಳ ವಿವರ:​ಬುರುಜನರೊಪ್ಪ ಗ್ರಾಮ ಪಂಚಾಯತಿ: ಒಟ್ಟು 08 ಪ್ರಾದೇಶಿಕ ಕ್ಷೇತ್ರಗಳಿದ್ದು, 19 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ. 
​ಮರಡಿಹಳ್ಳಿ ಗ್ರಾಮ ಪಂಚಾಯತಿ: ಒಟ್ಟು
05 ಕ್ಷೇತ್ರಗಳಿದ್ದು, 10 ಸ್ಥಾನಗಳನ್ನು ನಿಗದಿಪಡಿಸಲಾಗಿದೆ. 

​ಮದಕರಿನಾಯಕನಕೋಟೆ ಗ್ರಾಮ ಪಂಚಾಯತಿ: ಒಟ್ಟು 07 ಕ್ಷೇತ್ರಗಳಿದ್ದು, 20 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ. 
​ಯರಬಳ್ಳಿ ಗ್ರಾಮ ಪಂಚಾಯತಿ: ಒಟ್ಟು
07 ಕ್ಷೇತ್ರಗಳಿದ್ದು, 17 ಸ್ಥಾನಗಳನ್ನು ನೀಡಲಾಗಿದೆ. 

​ರಂಗೇನಹಳ್ಳಿ ಗ್ರಾಮ ಪಂಚಾಯತಿ: ಒಟ್ಟು 05 ಕ್ಷೇತ್ರಗಳಿದ್ದು, 14 ಸ್ಥಾನಗಳನ್ನು ನಿಗದಿಪಡಿಸಲಾಗಿದೆ. 
​ಕಣಜನಹಳ್ಳಿ ಗ್ರಾಮ ಪಂಚಾಯತಿ: ಒಟ್ಟು
07 ಕ್ಷೇತ್ರಗಳಿದ್ದು, 19 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ. 

​ಖಂಡೇನಹಳ್ಳಿ ಗ್ರಾಮ ಪಂಚಾಯತಿ: ಒಟ್ಟು 04 ಕ್ಷೇತ್ರಗಳಿದ್ದು, 13 ಸ್ಥಾನಗಳನ್ನು ನಿಗದಿಪಡಿಸಲಾಗಿದೆ. 
​ಪಿ.ಡಿ.ಕೋಟೆ ಗ್ರಾಮ ಪಂಚಾಯತಿ: ಒಟ್ಟು
05 ಕ್ಷೇತ್ರಗಳಿದ್ದು, 13 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ. 

​ಧರ್ಮಪುರ ಗ್ರಾಮ ಪಂಚಾಯತಿ: ಒಟ್ಟು 09 ಕ್ಷೇತ್ರಗಳಿದ್ದು, 22 ಸ್ಥಾನಗಳನ್ನು ನೀಡಲಾಗಿದೆ. 
​ಹರಿಯಬ್ಬೆ ಗ್ರಾಮ ಪಂಚಾಯತಿ: ಒಟ್ಟು
08 ಕ್ಷೇತ್ರಗಳಿದ್ದು, 19 ಸ್ಥಾನಗಳನ್ನು ನಿಗದಿಪಡಿಸಲಾಗಿದೆ. 

​ಅಬ್ಬಿನಹೊಳೆ ಗ್ರಾಮ ಪಂಚಾಯತಿ: ಒಟ್ಟು 07 ಕ್ಷೇತ್ರಗಳಿದ್ದು, 17 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ. 
​ಹರ್ತಿಕೋಟೆ ಗ್ರಾಮ ಪಂಚಾಯತಿ: ಒಟ್ಟು
05 ಕ್ಷೇತ್ರಗಳಿದ್ದು, 14 ಸ್ಥಾನಗಳನ್ನು ನೀಡಲಾಗಿದೆ. 

​ಐಮಂಗಲ ಗ್ರಾಮ ಪಂಚಾಯತಿ: ಒಟ್ಟು 09 ಕ್ಷೇತ್ರಗಳಿದ್ದು, 21 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ. 
​ಸೂರಗೊಂಡನಹಳ್ಳಿ ಗ್ರಾಮ ಪಂಚಾಯತಿ: ಒಟ್ಟು
10 ಕ್ಷೇತ್ರಗಳಿದ್ದು, 22 ಸ್ಥಾನಗಳನ್ನು ನಿಗದಿಪಡಿಸಲಾಗಿದೆ. 

​ಮೇಟಿಕುರ್ಕೆ ಗ್ರಾಮ ಪಂಚಾಯತಿ: ಒಟ್ಟು 08 ಕ್ಷೇತ್ರಗಳಿದ್ದು, 17 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ. 
​ಗನ್ನಾಯಕನಹಳ್ಳಿ ಗ್ರಾಮ ಪಂಚಾಯತಿ: ಒಟ್ಟು
07 ಕ್ಷೇತ್ರಗಳಿದ್ದು, 15 ಸ್ಥಾನಗಳನ್ನು ನೀಡಲಾಗಿದೆ. 

​ಮಸ್ಕಲ್ ಗ್ರಾಮ ಪಂಚಾಯತಿ: ಒಟ್ಟು 06 ಕ್ಷೇತ್ರಗಳಿದ್ದು, 15 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ. 
​ಈಶ್ವರಗೆರೆ ಗ್ರಾಮ ಪಂಚಾಯತಿ: ಒಟ್ಟು
08 ಕ್ಷೇತ್ರಗಳಿದ್ದು, 21 ಸ್ಥಾನಗಳನ್ನು ನಿಗದಿಪಡಿಸಲಾಗಿದೆ. 

​ಇಕ್ಕನೂರು ಗ್ರಾಮ ಪಂಚಾಯತಿ: ಒಟ್ಟು 08 ಕ್ಷೇತ್ರಗಳಿದ್ದು, 21 ಸ್ಥಾನಗಳನ್ನು ನೀಡಲಾಗಿದೆ. 
​ರಂಗನಾಥಪುರ ಗ್ರಾಮ ಪಂಚಾಯತಿ: ಒಟ್ಟು
06 ಕ್ಷೇತ್ರಗಳಿದ್ದು, 15 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ. 

​ಹೊಸಯಳನಡು ಗ್ರಾಮ ಪಂಚಾಯತಿ: ಒಟ್ಟು 09 ಕ್ಷೇತ್ರಗಳಿದ್ದು, 20 ಸ್ಥಾನಗಳನ್ನು ನಿಗದಿಪಡಿಸಲಾಗಿದೆ. 
​ಬಬ್ಬೂರು ಗ್ರಾಮ ಪಂಚಾಯತಿ: ಒಟ್ಟು
07 ಕ್ಷೇತ್ರಗಳಿದ್ದು, 16 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ. 

​ಕೂನಿಕೆರೆ ಗ್ರಾಮ ಪಂಚಾಯತಿ: ಒಟ್ಟು 07 ಕ್ಷೇತ್ರಗಳಿದ್ದು, 19 ಸ್ಥಾನಗಳನ್ನು ನೀಡಲಾಗಿದೆ. 
​ವಾಣಿವಿಲಾಸಪುರ ಗ್ರಾಮ ಪಂಚಾಯತಿ: ಒಟ್ಟು
08 ಕ್ಷೇತ್ರಗಳಿದ್ದು, 22 ಸ್ಥಾನಗಳನ್ನು ನಿಗದಿಪಡಿಸಲಾಗಿದೆ. 

​ಆದಿವಾಲ ಗ್ರಾಮ ಪಂಚಾಯತಿ: ಒಟ್ಟು 08 ಕ್ಷೇತ್ರಗಳಿದ್ದು, 24 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ. 
​ಕಸ್ತೂರಿರಂಗಪ್ಪನಹಳ್ಳಿ ಗ್ರಾಮ ಪಂಚಾಯತಿ: ಒಟ್ಟು
07 ಕ್ಷೇತ್ರಗಳಿದ್ದು, 13 ಸ್ಥಾನಗಳನ್ನು ನಿಗದಿಪಡಿಸಲಾಗಿದೆ. 

​ವರ್ಗವಾರು ಮೀಸಲಾತಿ ಪ್ರಕಟಣೆ:
​ಪ್ರತಿ ಗ್ರಾಮ ಪಂಚಾಯಿತಿಯ ಪ್ರಾದೇಶಿಕ ಕ್ಷೇತ್ರಗಳಿಗೆ ಅನುಸೂಚಿತ ಜಾತಿ (
SC), ಅನುಸೂಚಿತ ಪಂಗಡ (ST), ಹಿಂದುಳಿದ ವರ್ಗ '', ಹಿಂದುಳಿದ ವರ್ಗ '' ಹಾಗೂ ಸಾಮಾನ್ಯ ವರ್ಗಗಳಿಗೆ ಸೇರಿದಂತೆ ಮಹಿಳೆಯರಿಗೂ ನಿಯಮಾನುಸಾರ ಸ್ಥಾನಗಳನ್ನು ಮೀಸಲಿರಿಸಿ ಕೋಷ್ಟಕ-2 ರಲ್ಲಿ ಸಂಪೂರ್ಣ ವಿವರಗಳನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯವು ಬಿಡುಗಡೆ ಮಾಡಿದೆ. 

​ಗ್ರಾಮ ಪಂಚಾಯತಿ ಚುನಾವಣೆಗೆ ಮುನ್ನ ಕ್ಷೇತ್ರಗಳ ಗಡಿ ಗುರುತಿಸುವಿಕೆ ಹಾಗೂ ಮೀಸಲಾತಿ ಪ್ರಕ್ರಿಯೆಯು ಪೂರ್ಣಗೊಂಡಿರುವುದರಿಂದ ಸ್ಥಳೀಯ ರಾಜಕೀಯ ವಲಯದಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೈತರಿಗೆ 3 ದಿನಗಳ ವಸತಿಯುಕ್ತ ಉಚಿತ ಸಾವಯವ ಕೃಷಿ ತರಬೇತಿ ಹಾಗೂ ಪ್ರವಾಸಬಿಡದಿ ಟೌನ್‌ಶಿಪ್‌ ಯೋಜನೆ ವಿರುದ್ಧ ಕುಮಾರಸ್ವಾಮಿ, ಆರ್.ಅಶೋಕ್ ಚಾಲನೆ: ಪಾದಯಾತ್ರೆಯಲ್ಲಿ ಹಿರಿಯೂರು ಮುಖಂಡರು ಭಾಗಿಸರ್ಕಾರಿ ಶಾಲೆಗೆ ಭೂಮಿ ದಾನ ಅತ್ಯಂತ ಶ್ರೇಷ್ಠ ಕಾರ್ಯ-ಎನ್. ಶ್ರೀನಿವಾಸ್ ಚಿನ್ಮೂಲಾದ್ರಿ ಅಕ್ಷರೋತ್ಸವ ಕವಿಗೋಷ್ಟಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಡಾ.ಎಲ್.ಪಾಲಾಕ್ಷಯ್ಯಬಿಡದಿ ಟೌನ್‌ಶಿಪ್ ವಿರೋಧಿ ಪಾದಯಾತ್ರೆಗೆ ಸಿಎಂ ಡಿ.ಕೆ. ಶಿವಕುಮಾರ್ ಪ್ರತ್ಯುತ್ತರ:ಬಿಡದಿ ಟೌನ್‌ಶಿಪ್ ವಿರುದ್ಧ ಬಿಜೆಪಿ-ಜೆಡಿಎಸ್ ಜಂಟಿ ಸಮರ: ಬೈರಮಂಗಲದಿಂದ ಬೆಂಗಳೂರಿಗೆ 'ಪಾದಯಾತ್ರೆ' ಆರಂಭ"ನನ್ನನ್ನು ಕೊಂಡುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ": ಹೆಚ್.ಡಿ. ಕೆ ವಾಗ್ದಾಳಿ ಖಾತೆ ಹಂಚಿಕೆ, ಸಂಪುಟ ಪುನಾರಚನೆ ಕಸರತ್ತು: ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳಿದ ಸಿಎಂ ಶಿವಕುಮಾರ್ಪೊಲೀಸರ ಮೆಗಾ ಆಪರೇಷನ್: 105 ಅಕ್ರಮ ಬಾಂಗ್ಲಾ ವಲಸಿಗರ ಬಂಧನ, ಗಡಿಪಾರಿಗೆ ಕ್ರಮಸಚಿವ ನಾಗೇಂದ್ರ ರಾಜೀನಾಮೆಗೆ ಶ್ರೀರಾಮುಲು ಆಗ್ರಹ; ರೆಡ್ಡಿ ಬ್ರದರ್ಸ್‌ಗೆ ಈಶ್ವರ್ ಖಂಡ್ರೆ ತಿರುಗೇಟು