Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪುಣ್ಯ ಕ್ಷೇತ್ರ ಘಾಟಿ ಸುಬ್ರಹ್ಮಣ್ಯದಲ್ಲಿ ಕುಂಚಿಟಿಗ ಜನಾಂಗದ ಹಳೆ ಕಲ್ಯಾಣ ಮಂಟಪ ಪರಿವೀಕ್ಷಣೆ ಮಾಡಿದ ಟಿ.ಬಿ. ಜಯಚಂದ್ರ!

Advertisement
Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ: 
ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾದ ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯದಲ್ಲಿರುವ ಕುಂಚಿಟಿಗ ಜನಾಂಗಕ್ಕೆ ಸೇರಿದ ಮಳ್ಳವಳ್ಳಿ ಚಿಕ್ಕಣ್ಣ ಟ್ರಸ್ಟ್(ಸಂಘ)ದ ಹಳೆಯ ಕಲ್ಯಾಣ ಮಂಟಪದ ಜಾಗದಲ್ಲಿ ಮುಂದಿನ ದಿನಗಳಲ್ಲಿ ಆಧುನಿಕ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಶಿರಾ ಶಾಸಕರು ಹಾಗೂ ಮಳವಳ್ಳಿ ಚಿಕ್ಕಣ್ಣ ಟ್ರಸ್ಟ್‌ನ ಅಧ್ಯಕ್ಷರಾದ ಟಿ.ಬಿ. ಜಯಚಂದ್ರ ಅವರು ಪ್ರಕಟಿಸಿದ್ದಾರೆ.
 

ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಅವರು, ಸಂಘಕ್ಕೆ ಸೇರಿದ ಹಳೆಯ ಕಲ್ಯಾಣ ಮಂಟಪದ ಕಟ್ಟಡ ಮತ್ತು ಆವರಣವನ್ನು ವೀಕ್ಷಿಸಿ, ಪರಿವೀಕ್ಷಣೆ ನಡೆಸಿದ ಬಳಿಕ ಈ ಪ್ರಮುಖ ನಿರ್ಧಾರವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡರು.

ಸಮುದಾಯದ ಆಸ್ತಿ ವೃದ್ಧಿಗೆ ವಿನೂತನ ಯೋಜನೆ:
ವರ್ಷಗಳ ಇತಿಹಾಸವಿರುವ ಈ ಹಳೆಯ ಕಲ್ಯಾಣ ಮಂಟಪದ ಜಾಗವನ್ನು ಗರಿಷ್ಠ ಮಟ್ಟದಲ್ಲಿ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಟ್ರಸ್ಟ್ ಗಂಭೀರ ಚಿಂತನೆ ನಡೆಸಿದೆ. ಘಾಟಿ ಸುಬ್ರಹ್ಮಣ್ಯಕ್ಕೆ ನಿರಂತರವಾಗಿ ಭೇಟಿ ನೀಡುವ ಭಕ್ತಾದಿಗಳು ಮತ್ತು ಪ್ರವಾಸಿಗರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು, ಈ ಜಾಗದಲ್ಲಿ ಸುಸಜ್ಜಿತ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು ನೀಲನಕ್ಷೆ ಸಿದ್ಧಪಡಿಸಲಾಗುತ್ತಿದೆ. ಇದರಿಂದ ಸಮುದಾಯದ ಆಸ್ತಿ ಅಭಿವೃದ್ಧಿಯಾಗುವುದಲ್ಲದೆ, ಟ್ರಸ್ಟ್‌ಗೆ ಆರ್ಥಿಕ ಶಕ್ತಿಯೂ ಸಿಗಲಿದೆ ಎಂದು ಜಯಚಂದ್ರ ಅವರು ತಿಳಿಸಿದರು.

"ಘಾಟಿ ಸುಬ್ರಹ್ಮಣ್ಯ ಪುಣ್ಯಕ್ಷೇತ್ರದಲ್ಲಿರುವ ನಮ್ಮ ಮಳ್ಳವಳ್ಳಿ ಚಿಕ್ಕಣ್ಣ ಸಂಘದ ಹಳೆಯ ಆಸ್ತಿಯನ್ನು ಪರಿಶೀಲಿಸಲಾಗಿದೆ. ಈ ಜಾಗದಲ್ಲಿ ಮುಂದಿನ ದಿನಗಳಲ್ಲಿ ಸುಸಜ್ಜಿತ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವ ಮೂಲಕ ಜಾಗದ ಸದ್ಬಳಕೆ ಹಾಗೂ ಸಮುದಾಯದ ಹಿತರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು." ಟಿ.ಬಿ. ಜಯಚಂದ್ರ, ಶಿರಾ ಶಾಸಕರು ಹಾಗೂ ಟ್ರಸ್ಟ್ ಅಧ್ಯಕ್ಷರು.

news_1781448955_1_606.webp

 

ತಾಂತ್ರಿಕ ಪರಿಶೀಲನೆ ಹಾಗೂ ಗಣ್ಯರ ಉಪಸ್ಥಿತಿ:
ಕಟ್ಟಡದ ಸ್ಥಿತಿಗತಿ ಹಾಗೂ ಮುಂದಿನ ವಾಣಿಜ್ಯ ಯೋಜನೆಯ ತಾಂತ್ರಿಕ ಸಾಧ್ಯತೆಗಳ ಕುರಿತು ಚರ್ಚಿಸಲು ವಿಶ್ರಾಂತ ಕಾರ್ಯಪಾಲಕ ಅಭಿಯಂತರರಾದ ಗೋಪಿಕುಂಟೆ ಈಶ್ವರಯ್ಯ ಅವರು ಟಿ.ಬಿ. ಜಯಚಂದ್ರ ಅವರೊಂದಿಗೆ ಉಪಸ್ಥಿತರಿದ್ದು, ಸೂಕ್ತ ತಾಂತ್ರಿಕ ಸಲಹೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಕುಂಚಿಟಿಗ ಜನಾಂಗದ ಪ್ರಮುಖರು, ಮಳವಳ್ಳಿ ಚಿಕ್ಕಣ್ಣ ಟ್ರಸ್ಟ್‌ನ ಪದಾಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ನೂತನ ಕಟ್ಟಡ ನಿರ್ಮಾಣದ ಯೋಜನೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

ಮುಂಬರುವ ದಿನಗಳಲ್ಲಿ ಈ ವಾಣಿಜ್ಯ ಸಂಕೀರ್ಣದ ನಿರ್ಮಾಣ ಕಾರ್ಯ ಅಧಿಕೃತವಾಗಿ ಆರಂಭವಾಗಲಿದ್ದು, ಇದು ಘಾಟಿ ಸುಬ್ರಹ್ಮಣ್ಯದ ವಾಣಿಜ್ಯ ಚಟುವಟಿಕೆಗಳಿಗೆ ಮತ್ತಷ್ಟು ವೇಗ ನೀಡುವ ನಿರೀಕ್ಷೆಯಿದೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.