Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಟೀಚರ್‍ಸ್ ಕಾಲೋನಿ 

Advertisement
Advertisement

  ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಬುದ್ದ ಸರ್ಕಲ್‌ನಿಂದ ಮೇಲ್ಬಾಗದಲ್ಲಿರುವ ಟೀಚರ್‍ಸ್ ಕಾಲೋನಿ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ.

ಪೊದೆ, ಕುರುಚಲು ಗಿಡಗಳೆ ಹೆಚ್ಚಾಗಿರುವ ಟೀಚರ್‍ಸ್ ಕಾಲೋನಿಯಲ್ಲಿ ಎಂಟು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತದೆ. ಬೀದಿ ದೀಪಗಳು ಅಷ್ಟಕಷ್ಟೆ. ಕೆಲವು ಕಡೆ ರಾತ್ರಿ ವೇಳೆ ಕಾರ್ಗತ್ತಲು ಆವರಿಸುತ್ತದೆ. ಕೆಲವೊಮ್ಮೆ ಹಾವುಗಳು ರಸ್ತೆಯಲ್ಲೇ ಮಲಗಿರುತ್ತವೆ. ನಗರಸಭೆ ಕಸದ ವಾಹನ ಎರಡು ಮೂರು ದಿನಕ್ಕೊಮ್ಮೆ ಬರುತ್ತದೆ. ಸಮನಾಗಿಲ್ಲದ ರಸ್ತೆಗಳು ತಗ್ಗು-ದಿಣ್ಣೆಯಿಂದ ಕೂಡಿದೆ. ವಯಸ್ಸಾದವರು ಇಲ್ಲಿ ನಡೆದಾಡುವುದೇ ಕಷ್ಟ. ಮಳೆಗಾಲದಲ್ಲಿ ರಸ್ತೆಗಳು ಕೆಸರುಮಯವಾಗಿರುತ್ತವೆ.

ಖಾಲಿ ನಿವೇಶನಗಳಲ್ಲಿ ಕಸದ ರಾಶಿಯೆ ಕಣ್ಣಿಗೆ ರಾಚುತ್ತದೆ. ಬೀದಿ ನಾಯಿ, ಹಂದಿಗಳು ಎಗ್ಗಿಲ್ಲದೆ ಓಡಾಡುತ್ತಿರುತ್ತವೆ. ನಿವೃತ್ತ ಶಿಕ್ಷಕರು, ಉಪಾಧ್ಯಾಯರು, ಉಪನ್ಯಾಸಕರು ಅಧ್ಯಾಪಕರುಗಳೆ ಇಲ್ಲಿ ಹೆಚ್ಚು ವಾಸವಾಗಿರುವುದರಿಂದಲೆ ಟೀಚರ್‍ಸ್ ಕಾಲೋನಿ ಎಂಬ ಹೆಸರಿಡಲಾಗಿದೆ.

ಇಲ್ಲಿರುವುದು ಐಷಾರಾಮಿ ಮನೆಗಳೆ. ಆದರೆ ಸಮಸ್ಯೆಗಳ ಆಗರವಾಗಿದೆ. ಹಿರಿಯೂರಿನ ವಾಣಿವಿಲಾಸಸಾಗರ, ಶಾಂತಿಸಾಗರದ ನೀರು ಸರಿಯಾಗಿ ಸರಬರಾಜಿಲ್ಲದ ಕಾರಣ ಇಲ್ಲಿನ ನಿವಾಸಿಗಳು ಬೋರ್‌ವೆಲ್ ನೀರನ್ನೆ ಆಶ್ರಯಿಸಿದ್ದಾರೆ.

ನಗರಸಭೆಯಾಗಲಿ, ಜಿಲ್ಲಾಡಳಿತವಾಗಲಿ ಒಮ್ಮೆ ಇತ್ತ ಕಣ್ಣಾಯಿಸುವುದು ಸೂಕ್ತವೆಂದು ಟೀಚರ್‍ಸ್ ಕಾಲೋನಿ ನಿವಾಸಿ ನಿವೃತ್ತ ಮುಖ್ಯ ಶಿಕ್ಷಕ ಎಲ್.ಸೀತಾರಾಮಯ್ಯ ಮನವಿ ಮಾಡಿದ್ದಾರೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಎಸ್ಎಸ್ಎನ್ ಚುನಾವಣೆಯಲ್ಲಿ ಕಾಂಗ್ರೆಸ್ ಮಾತು ತಪ್ಪಿದೆ:ಹರೀಶ್ ಗೌಡಮೇ 25 ಕ್ಕೆ ದೊಡ್ಡಬಳ್ಳಾಪುರ ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಶಿಕ್ಷಣಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್ ಪೂರಕ:ಪಿ.ಜಿ.ಆರ್ ಸಿಂಧ್ಯಾಭದ್ರಾ ಮೇಲ್ದಂಡೆ ಯೋಜನೆ ಮತ್ತು ಕಾಲುವೆಗಳಿಗೆ ಮೈಸೂರು ಅರಸರ ಹೆಸರಿಡಲಿಚಿತ್ರದುರ್ಗ ನಗರಸಭೆ ಪೌರಾಯುಕ್ತರ ನಿರ್ಲಕ್ಷ್ಯ: ಹೆಚ್ಚುತ್ತಿರುವ ಹಂದಿಗಳ ಹಾವಳಿ!ಹಿರಿಯೂರಿನಲ್ಲಿ 'ಸಾನ್ವಿತ್ಸ್ ಫ್ರೂಟ್ ಬಾಸ್ಕೆಟ್' ಭರ್ಜರಿ ಆರಂಭ: ತಾಜಾ ಹಣ್ಣುಗಳ ಲೋಕ ಗ್ರಾಹಕರಿಗೆ ಮುಕ್ತ ಮುಕ್ತ!ಒಕ್ಕಲಿಗ ಸಮಾಜದಿಂದ ನುಡಿ ನಮನ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮದಿ.ಸುಧಾಕರ್ ನುಡಿನಮನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಪ್ರವಾಸ ರದ್ದು​‘ಬ್ರಾಂಡ್ ಬೆಂಗಳೂರು’ ಹೆಸರಿನಲ್ಲಿ ಅವ್ಯವಸ್ಥೆ: ಆರ್. ಅಶೋಕ್ಬೆಂಗಳೂರು ಉತ್ತರ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗ ಕಾರ್ಯಕ್ರಮ ಯಶಸ್ವಿ