ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಮೈಸೂರಿನ ವಸ್ತು ಪ್ರದರ್ಶನದ ಕಾಳಿಂಗರಾವ್ ಸಭಾಂಗಣದಲ್ಲಿ ನಡೆದ ರಾಜ್ಯಮಟ್ಟದ ದಸರಾ ಯೋಗ ಸ್ಪರ್ಧೆ -2025ರಲ್ಲಿ
ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರದ ಯೋಗ ಪಟುಗಳಾದ ಪಿ.ಎಸ್ ಶಶಾಂಕ್, ಜಿ.ನವನೀತ್, ಎಂ.ಆರ್ ಜಾಹ್ನವಿ, ವಿ.ವರ ಪ್ರಸಾದ್, ಕೆ.ವಿನಯ ಕುಮಾರ್, ಎ.ಆರ್ ಕೌಶಿಕ್ ಕುಮಾರ್, ಎ.ಹಿತೇಶ್ ಬಹುಮಾನ ಪಡೆದು ದೊಡ್ಡಬಳ್ಳಾಪುರಕ್ಕೆ ಕೀರ್ತಿ ತಂದಿರುತ್ತಾರೆ.


