Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಯುವಶಕ್ತಿ ಎಂದರೆ ರಾಜಕೀಯದ ದಿಕ್ಕು ಬದಲಿಸುವ ಶಕ್ತಿ - ಪರಿವರ್ತನೆಯ ಹೊಸ ಅಧ್ಯಾಯ

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತವು ಯುವಜನರ ದೇಶವೆಂದು ಕರೆಯಲ್ಪಡುತ್ತದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಹೆಚ್ಚಿನವರು ಯುವಕರಾಗಿದ್ದು ರಾಷ್ಟ್ರದ ಅಭಿವೃದ್ಧಿಯಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ರಾಜಕೀಯ ಕ್ಷೇತ್ರದಲ್ಲಿಯೂ ಯುವಕರು ಹೊಸ ಚಿಂತನೆ, ಶಕ್ತಿ ಮತ್ತು ನಾಯಕತ್ವವನ್ನು ತಂದು ದೇಶದ ಭವಿಷ್ಯ ರೂಪಿಸುವ ಸಾಮರ್ಥ್ಯ ಹೊಂದಿದ್ದಾರೆ. ಯುವಕರು ಸಮಾಜದ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಜನರ ಪರವಾಗಿ ಧ್ವನಿ ಎತ್ತುವ ಶಕ್ತಿಯನ್ನು ಹೊಂದಿದ್ದಾರೆ. ಶಿಕ್ಷಣ, ಉದ್ಯೋಗ, ಪರಿಸರ ಸಂರಕ್ಷಣೆ, ಮಹಿಳಾ ಸುರಕ್ಷತೆ, ಭ್ರಷ್ಟಾಚಾರ ವಿರೋಧ ಮತ್ತು ಸಾಮಾಜಿಕ ನ್ಯಾಯದಂತಹ ವಿಷಯಗಳಲ್ಲಿ ಯುವಕರು ಜಾಗೃತಿ ಮೂಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಜನರಲ್ಲಿ ರಾಜಕೀಯ ಅರಿವು ಹೆಚ್ಚಿಸುವ ಕೆಲಸವನ್ನು ಸಹ ಮಾಡುತ್ತಿದ್ದಾರೆ.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿಯೂ ಯುವಕರ ಪಾತ್ರ ಅಪಾರವಾಗಿತ್ತು. ಭಗತ್ ಸಿಂಗ್, ಚಂದ್ರಶೇಖರ ಆಜಾದ್ ಮತ್ತು ಸುಭಾಷ್ ಚಂದ್ರ ಬೋಸ್ ಅವರಂತಹ ಯುವ ನಾಯಕರು ದೇಶಕ್ಕಾಗಿ ಹೋರಾಡಿ ಪ್ರೇರಣೆಯಾಗಿದ್ದಾರೆ.

ಯುವಕರು ದೇಶದ ಶಕ್ತಿ ಮತ್ತು ಭವಿಷ್ಯ ಭಾರತೀಯ ರಾಜಕೀಯದಲ್ಲಿ ಯುವಕರ ಸಕ್ರಿಯ ಭಾಗವಹಿಸುವಿಕೆಯು ದೇಶದ ಪ್ರಗತಿಗೆ ಬಹಳ ಅಗತ್ಯವಾಗಿದೆ. ಯುವಕರು ರಾಜಕೀಯದಲ್ಲಿ ಭಾಗವಹಿಸುವುದರಿಂದ ಹೊಸ ಆಲೋಚನೆಗಳಿಂದ ಕೂಡಿದ ತಂತ್ರಜ್ಞಾನ ಆಧಾರಿತ ಆಡಳಿತ ತರಬಹುದು, ಭ್ರಷ್ಟಾಚಾರ ನಿಯಂತ್ರಿಸಬಹುದು, ಜನಪರ ಯೋಜನೆಗಳು ರೂಪುಗೊಳಿಸಬಹುದು, ಸಮಾಜದಲ್ಲಿ ನ್ಯಾಯ ಸ್ಥಾಪಿಸಬಹುದು, ಪ್ರಗತಿಪರ ವ್ಯವಸ್ಥೆಗಳನ್ನು ತರಬಹುದು, ಹೀಗೆ ದೇಶದ ಇನ್ನೂ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರಗಳು ಕೊಂಡುಕೊಳ್ಳಬಹುದು.

ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದು, ಅಭಿವೃದ್ಧಿ ಯೋಜನೆಗಳನ್ನು ರೂಪಿಸುವುದು ಮತ್ತು ಸಮಾಜದಲ್ಲಿ ಸಮಾನತೆ ಸ್ಥಾಪಿಸುವುದು ರಾಜಕೀಯದ ಉದ್ದೇಶವಾಗಿದೆ. ಜವಾಬ್ದಾರಿಯುತ, ಪ್ರಾಮಾಣಿಕ ಮತ್ತು ಸಮಾಜಮುಖಿ ಯುವ ನಾಯಕರು ಬೆಳೆಯುವಾಗ ಭಾರತ ಮತ್ತಷ್ಟು ಬಲಿಷ್ಠ ರಾಷ್ಟ್ರವಾಗುತ್ತದೆ. ರಾಜಕೀಯವೆಂದರೆ ಕೇವಲ ಅಧಿಕಾರದ ಹೋರಾಟವಲ್ಲ, ಅದು ಸಮಾಜ ಸೇವೆಯ ಮಾರ್ಗವಾಗಿದೆ. ಮತದಾನದ ಮೂಲಕ ಉತ್ತಮ ನಾಯಕರನ್ನು ಆಯ್ಕೆ ಮಾಡುವ ಜವಾಬ್ದಾರಿಯೂ ಕೂಡ ಯುವಕರ ಮೇಲಿದೆ. ಆದರೆ ಹಣದ ಪ್ರಭಾವ, ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರದಂತಹ ತುಡುಗುಗಳು ಯುವಕರ ರಾಜಕೀಯ ಪ್ರವೇಶಕ್ಕೆ ತೊಂದರೆ ಉಂಟುಮಾಡುತ್ತಿವೆ. ಆದ್ದರಿಂದ ಯುವಕರಿಗೆ ರಾಜಕೀಯ ಶಿಕ್ಷಣ, ನಾಯಕತ್ವ ತರಬೇತಿ ಮತ್ತು ಸಮಾನ ಅವಕಾಶಗಳನ್ನು ನೀಡುವುದು ಬಹಳ ಅಗತ್ಯವಾಗಿದೆ.

ಯುವಕರು ದೇಶದ ಬೆನ್ನೆಲುಬು ಎಂದು ಹೇಳಲಾಗುತ್ತದೆ. ಒಂದು ದೇಶದ ಭವಿಷ್ಯ ಅದರ ಯುವಜನತೆಯ ಮೇಲೆ ಅವಲಂಬಿತವಾಗಿರುತ್ತದೆ. ರಾಜಕೀಯವು ಸಮಾಜದ ಅಭಿವೃದ್ಧಿ, ಆಡಳಿತ ಮತ್ತು ಜನಸೇವೆಗೆ ಸಂಬಂಧಿಸಿದ ಮಹತ್ವದ ಕ್ಷೇತ್ರವಾಗಿದೆ. ಆದ್ದರಿಂದ ಯುವಕರು ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಪ್ರಜಾಪ್ರಭುತ್ವದ ಬಲವರ್ಧನೆಗೆ ಅಗತ್ಯವಾಗಿದೆ.

ಇಂದಿನ ಯುವಕರು ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂದಿದ್ದಾರೆ. ಅವರು ಹೊಸ ಆಲೋಚನೆಗಳು ಮತ್ತು ಹೊಸ ದೃಷ್ಟಿಕೋನಗಳನ್ನು ಹೊಂದಿದ್ದಾರೆ. ದೇಶದಲ್ಲಿ ನಡೆಯುವ ಅನ್ಯಾಯ, ಭ್ರಷ್ಟಾಚಾರ ಮತ್ತು ಸಾಮಾಜಿಕ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುವ ಶಕ್ತಿ ಯುವಕರಲ್ಲಿದೆ.

ಇಂದಿನ ಯುವಕರು ನಿರುದ್ಯೋಗ, ಶಿಕ್ಷಣ, ಪರಿಸರ ಸಮಸ್ಯೆ, ರೈತರ ಸಂಕಷ್ಟ ಮತ್ತು ಸಾಮಾಜಿಕ ಅಸಮಾನತೆ ಮುಂತಾದ ವಿಷಯಗಳಲ್ಲಿ ಜಾಗೃತರಾಗಿದ್ದಾರೆ. ಅವರು ಸಾಮಾಜಿಕ ಜಾಲತಾಣಗಳ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಮತದಾನದ ಮಹತ್ವವನ್ನು ತಿಳಿಸಿ ಉತ್ತಮ ನಾಯಕರನ್ನು ಆಯ್ಕೆ ಮಾಡುವಲ್ಲಿ ಸಹ ಪಾತ್ರವಹಿಸುತ್ತಿದ್ದಾರೆ. ಕೆಲ ಯುವಕರು ನೇರವಾಗಿ ರಾಜಕೀಯ ಪ್ರವೇಶಿಸಿ ಜನಸೇವೆ ಮಾಡಲು ಮುಂದಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಆದರೆ ರಾಜಕೀಯದಲ್ಲಿ ಯಶಸ್ಸು ಪಡೆಯಲು ಕೇವಲ ಉತ್ಸಾಹ ಸಾಕಾಗುವುದಿಲ್ಲ. ಉತ್ತಮ ಜ್ಞಾನ, ಶಿಸ್ತು, ಸಹನೆ ಮತ್ತು ನೈತಿಕತೆ ಅಗತ್ಯ. ಕೆಲವೊಮ್ಮೆ ಯುವಕರು ಜಾತಿ, ಧರ್ಮ ಅಥವಾ ಪಕ್ಷಪಾತದ ರಾಜಕೀಯಕ್ಕೆ ಒಳಗಾಗುವ ಸಾಧ್ಯತೆಯೂ ಇದೆ. ಇದು ಸಮಾಜದ ಏಕತೆಗೆ ಹಾನಿಕಾರಕವಾಗಬಹುದು. ಆದ್ದರಿಂದ ಯುವಕರು ವಿಚಾರಪೂರ್ಣವಾಗಿ ನಡೆದುಕೊಳ್ಳಬೇಕು.

ಯುವಕರು ದೇಶದ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಮೌಲ್ಯಗಳನ್ನು ಅರ್ಥಮಾಡಿಕೊಳ್ಳಬೇಕು. ಸ್ವಾರ್ಥದ ರಾಜಕೀಯಕ್ಕಿಂತ ದೇಶ ಸೇವೆಗೆ ಆದ್ಯತೆ ನೀಡಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕತ್ವವನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಉತ್ತಮ ಸಮಾಜ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯವಾಗುತ್ತದೆ.

ದೇಶದ ಅಭಿವೃದ್ಧಿಗೆ ಯುವಕರ ಪಾತ್ರ ಅತ್ಯಂತ ಮುಖ್ಯವಾದರೂ, ಹಲವಾರು ಅಡ್ಡಿ - ಆತಂಕಗಳಿಂದ ಅವರ ರಾಜಕೀಯ ಪ್ರವೇಶಕ್ಕೆ ತಡೆಯಾಗುತ್ತಿವೆ.

1. ಹಣದ ಪ್ರಭಾವ
ರಾಜಕೀಯದಲ್ಲಿ ಸ್ಪರ್ಧಿಸಲು ಹೆಚ್ಚಿನ ಹಣದ ಅವಶ್ಯಕತೆ ಇರುವುದರಿಂದ ಸಾಮಾನ್ಯ ಕುಟುಂಬದ ಯುವಕರು ಹಿಂದೆ ಸರಿಯುತ್ತಾರೆ. ಚುನಾವಣೆ ವೆಚ್ಚ, ಪ್ರಚಾರ ಮತ್ತು ಪಕ್ಷದ ಚಟುವಟಿಕೆಗಳಿಗೆ ಹಣದ ಪ್ರಾಬಲ್ಯ ಹೆಚ್ಚಾಗಿದೆ.

2. ಕುಟುಂಬ ರಾಜಕಾರಣ
ಕೆಲವು ರಾಜಕೀಯ ಪಕ್ಷಗಳಲ್ಲಿ ಕುಟುಂಬ ಆಧಾರಿತ ನಾಯಕತ್ವ ಹೆಚ್ಚಿರುವುದರಿಂದ ಹೊಸ ಯುವಕರಿಗೆ ಅವಕಾಶ ಕಡಿಮೆಯಾಗುತ್ತದೆ. ರಾಜಕೀಯ ಹಿನ್ನೆಲೆ ಇಲ್ಲದ ಯುವಕರು ಮುಂದೆ ಬರಲು ಸಂಕಷ್ಟ ಅನುಭವಿಸುತ್ತಾರೆ.

3. ಭ್ರಷ್ಟಾಚಾರದ ಭಯ
ರಾಜಕೀಯ ಕ್ಷೇತ್ರದಲ್ಲಿ ಭ್ರಷ್ಟಾಚಾರ, ಗುಂಪುಗಾರಿಕೆ ಮತ್ತು ಅಪ್ರಾಮಾಣಿಕತೆ ಹೆಚ್ಚಿದೆ ಎಂಬ ಭಾವನೆ ಯುವಕರಲ್ಲಿ ಮೂಡಿದೆ. ಇದರಿಂದ ರಾಜಕೀಯದ ಬಗ್ಗೆ ನಿರಾಸಕ್ತಿ ಉಂಟಾಗುತ್ತದೆ.

4. ಉದ್ಯೋಗ ಮತ್ತು ಶಿಕ್ಷಣದ ಒತ್ತಡ
ಇಂದಿನ ಯುವಕರು ಉದ್ಯೋಗ, ವಿದ್ಯಾಭ್ಯಾಸ ಮತ್ತು ಭವಿಷ್ಯದ ಭದ್ರತೆ ಬಗ್ಗೆ ಹೆಚ್ಚು ಗಮನ ಹರಿಸುತ್ತ 

5. ಸಾಮಾಜಿಕ ಟೀಕೆ ಮತ್ತು ಒತ್ತಡ
ರಾಜಕೀಯಕ್ಕೆ ಬಂದ ಯುವಕರನ್ನು ಸಮಾಜ ಕೆಲವೊಮ್ಮೆ ತಪ್ಪಾಗಿ ಅರ್ಥೈಸುತ್ತದೆ. ಕುಟುಂಬದವರಿಂದಲೂ ರಾಜಕೀಯದಲ್ಲಿ ಭವಿಷ್ಯ ಇಲ್ಲಎಂಬ ಮಾತುಗಳು ಕೇಳಿಬರುತ್ತವೆ. 

6. ಅನುಭವದ ಕೊರತೆ
ರಾಜಕೀಯದ ಬಗ್ಗೆ ಸರಿಯಾದ ಮಾರ್ಗದರ್ಶನ ಮತ್ತು ತರಬೇತಿ ಕೊರತೆಯಿಂದ ಯುವಕರು ಆತ್ಮವಿಶ್ವಾಸ ಕಳೆದುಕೊಳ್ಳುತ್ತಾರೆ. ನಾಯಕತ್ವ ಕೌಶಲ್ಯ ಬೆಳೆಸುವ ವೇದಿಕೆಗಳು ಕಡಿಮೆ ಇವೆ. 

7. ಅಪರಾಧ ಮತ್ತು ಹಿಂಸಾಚಾರದ ಭಯ
ಕೆಲವೆಡೆ ರಾಜಕೀಯವು ಗಲಾಟೆ, ಬೆದರಿಕೆ ಮತ್ತು ವೈಷಮ್ಯಗಳೊಂದಿಗೆ ಸಂಪರ್ಕ ಹೊಂದಿರುವುದರಿಂದ ಶಾಂತಿಯುತ ಮನೋಭಾವದ ಯುವಕರು ದೂರ ಉಳಿಯುತ್ತಾರೆ. 

ಒಟ್ಟಿನಲ್ಲಿ, ಯುವಕರು ರಾಜಕೀಯದಲ್ಲಿ ಭಾಗವಹಿಸುವುದು ದೇಶದ ಅಭಿವೃದ್ಧಿಗೆ ಅತ್ಯಂತ ಮುಖ್ಯವಾಗಿದೆ. ಯುವಶಕ್ತಿ ಸಕಾರಾತ್ಮಕ ದಾರಿಯಲ್ಲಿ ಸಾಗಿದರೆ ದೇಶವು ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತದೆ. ಇಂದಿನ ಯುವಕರು ನಾಳೆಯ ನಾಯಕರುಎಂಬ ಮಾತು ನಿಜವಾಗಲು ಯುವಕರು ಜವಾಬ್ದಾರಿಯುತ ರಾಜಕೀಯ ಪಾಲ್ಗೊಳ್ಳುವಿಕೆಯನ್ನು ಬೆಳೆಸಿಕೊಳ್ಳಬೇಕು. ಯುವಕರು ರಾಜಕೀಯದಿಂದ ದೂರ ಉಳಿದರೆ ದೇಶದ ಭವಿಷ್ಯ ದುರ್ಬಲವಾಗುತ್ತದೆ. ಆದ್ದರಿಂದ ರಾಜಕೀಯ ಕ್ಷೇತ್ರವನ್ನು ಪಾರದರ್ಶಕ, ಸ್ವಚ್ಛ ಮತ್ತು ಯುವ ಸ್ನೇಹಿಯಾಗಿಸಲು ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ಕ್ರಮ ಕೈಗೊಳ್ಳಬೇಕು. ಯುವಕರಿಗೆ ಅವಕಾಶ, ಮಾರ್ಗದರ್ಶನ ಮತ್ತು ಪ್ರೋತ್ಸಾಹ ದೊರೆತರೆ ದೇಶದ ರಾಜಕೀಯ ವ್ಯವಸ್ಥೆಗೆ ಹೊಸ ಶಕ್ತಿ ದೊರೆಯುತ್ತದೆ.
ಲೇಖನ
: ಅಧ್ಯಕ್ಷ ಡಾ. ಎಂ ವಸಂತ್ ಆಚಾರ್, ಭಾರತೀಯ ಜನತಾ ಪಾರ್ಟಿ, ಚಿತ್ರದುರ್ಗ ನಗರ ಯುವ ಮೋರ್ಚಾ.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನ್ಯಾಷನಲ್ ಫ್ರೈಡ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಪಟ್ಟಣ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸಿ.ನಾರಾಯಣಸ್ವಾಮಿ ಆಯ್ಕೆಕೆ.ಹೆಚ್ ಮುನಿಯಪ್ಪ ರವರ ಹಿರಿತನಕ್ಕೆ ತಕ್ಕ ಖಾತೆ ನೀಡಬೇಕು-ಆರ್.ವಿ ಮಹೇಶ್ಹಸಿರ ಒಡಲಿಗೆ ಚಿಣ್ಣರ ಪ್ರೀತಿಯ ಸ್ಪರ್ಶ: ಕರಗಿದ ಕಲ್ಲುಕೋಟೆಯ ನಾಡು!ಮಲ್ಲಿಕಾರ್ಜುನ ಖರ್ಗೆ, ಪವನ್ ಖೇರಾ ಸೇರಿ ಮೂವರಿಂದ ನಾಮಪತ್ರ ಸಲ್ಲಿಕೆಬಿಜೆಪಿಗೆ ಅಣ್ಣಾಮಲೈ ಗುಡ್‌ಬೈ: 6 ವರ್ಷಗಳ ಸುದೀರ್ಘ ಸಂಬಂಧ ಅಂತ್ಯ, ರಾಜೀನಾಮೆ ಅಂಗೀಕರಿಸಿದ ಹೈಕಮಾಂಡ್ಸರ್ಕಾರಕ್ಕೆ ಮೊದಲ ಶಾಕ್: ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ!ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈತಪ್ಪಿಲ್ಲ, ಅದು ಪಕ್ಷದ ‘ಒಬ್ಬರಿಗೆ ಒಂದು ಹುದ್ದೆ’ ಸೂತ್ರ: ಸಚಿವ ಸತೀಶ್ ಜಾರಕಿಹೊಳಿಖಾತೆ ಕಿಚ್ಚು: ಸಚಿವರ ಅಸಮಾಧಾನದ ಸವಾಲಿಗೆ 'ಕನಕಪುರ ಬಂಡೆ' ರೆಡಿ!ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಶಂಕಿತ ಉಗ್ರನ ಬಂಧನ: ತುಮಕೂರು ಪೊಲೀಸರ ಭರ್ಜರಿ ಕಾರ್ಯಾಚರಣೆ!