ಭಯೋತ್ಪಾದಕ ದೇಶ ಪಾಕಿಸ್ತಾನಕ್ಕೆ ಸೇರಿದ ಯಾವೊಬ್ಬ ಪಾಕ್‌ ಪ್ರಜೆಯೂ ಇಲ್ಲಿರಬಾರದು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರ ಸರ್ಕಾರದ ಗೃಹ ಇಲಾಖೆಯ ಸೂಚನೆಯಂತೆ ರಾಜ್ಯದಲ್ಲಿ ನೆಲೆಸಿರುವ ಪಾಕ್‌ಪ್ರಜೆಗಳನ್ನು ಪತ್ತೆಹಚ್ಚಿ ಹೊರ ಹಾಕಲು ಕರ್ನಾಟಕ ಕಾಂಗ್ರೆಸ್
ಸರ್ಕಾರ, ಗೃಹ ಸಚಿವರಾದ ಪರಮೇಶ್ವರ್‌ಅವರು, ರಾಜ್ಯ ಪೊಲೀಸ್‌ಇಲಾಖೆ ಅಗತ್ಯ ತುರ್ತು ಕ್ರಮವಹಿಸಬೇಕಿದೆ ಎಂದು ಜೆಡಿಎಸ್ ಆಗ್ರಹ ಮಾಡಿದೆ.

ಸಿದ್ದರಾಮಯ್ಯಅವರೆಲ್ಲರೂ ನಮ್ಮವರೇ,  ಡಿ.ಕೆ ಶಿವಕುಮಾರ್ಅವರೆಲ್ಲ ನಮ್ಮ ಬ್ರದರ್ಸ್‌, ಡಾ.ಜಿ ಪರಮೇಶ್ವರ್ಅವರೆಲ್ಲರ ಬಗ್ಗೆ ನಮಗೆ ಮಾಹಿತಿ ಇಲ್ಲ ಎನ್ನುವ ಈ ರೀತಿ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡದೆ ಕೇಂದ್ರ ಗೃಹ ಇಲಾಖೆಯ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಜೆಡಿಎಸ್ ತಾಕೀತು ಮಾಡಿದೆ.

ಪಹಲ್ಗಾಮ್‌ಭಯೋತ್ಪಾದಕ ದಾಳಿ ನಯವಂಚಕ ಪಾಕಿಸ್ತಾನದ ಉಗ್ರರ ಕೃತ್ಯವಾಗಿದೆ. ಶಾಂತಿಯ ದೇಶವಾದ ಭಾರತದಲ್ಲಿ, ಭಯೋತ್ಪಾದಕ ದೇಶವಾದ ಪಾಕಿಸ್ತಾನಕ್ಕೆ ಸೇರಿದ ಯಾವೊಬ್ಬ ಪಾಕ್‌ಪ್ರಜೆಯೂ ಇರಬಾರದು ಎಂದು ಜೆಡಿಎಸ್ ಆಗ್ರಹ ಮಾಡಿದೆ.

 

Share This Article
error: Content is protected !!
";