ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಲೆಕ್ಷನ್ ಗಿರಾಕಿ ಡಿ.ಕೆ ಶಿವಕುಮಾರ್ ಇನ್ನೊಮ್ಮೆ ಕೇಳಿಸ್ಕೋಳ್ಳಿ..ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ ಯಾವುದೇ ವಿರೋಧ ಇಲ್ಲ ಎಂದು ಜೆಡಿಎಸ್ ತಿಳಿಸಿದೆ.
ನಮ್ಮ ವಿರೋಧ ಇರುವುದು ಬಿ ಖಾತಾ ಪರಿವರ್ತನೆ ಹೆಸರಲ್ಲಿ ಕಮಿಷನ್ ಕರ್ನಾಟಕ ಕಾಂಗ್ರೆಸ್ ಸರ್ಕಾರ 4 ಲಕ್ಷ , 5 ಲಕ್ಷ ರೂ. ಎಂದು ಲಕ್ಷ ಲಕ್ಷ ರೂ. ವಸೂಲಿ ಮಾಡಿ ಬಡವರ ರಕ್ತ ಹೀರುತ್ತಿರುವುದಕ್ಕೆ ಎಂದು ಜೆಡಿಎಸ್ ತಿಳಿಸಿದೆ.
ಬಿ ಖಾತೆಹೊಂದಿರುವ ಬಡವರು ಮನೆ ಕಟ್ಟಿದ ದಿನದಿಂದ ಸರ್ಕಾರಕ್ಕೆ ಟ್ಯಾಕ್ಸ್ ಕೂಡ ಪಾವತಿಸುತ್ತಾ ಬಂದಿದ್ದಾರೆ. ಅಂತವರಿಗೆ ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಮಾಡಲು ಲಕ್ಷಾಂತರ ರೂ. ಕೇಳಿದರೆ ಬಡವರು ಎಲ್ಲಿಂದ ಹಣ ತರುತ್ತಾರೆ.
ಉಸ್ತುವಾರಿ ಮಂತ್ರಿಯಾಗಿ ಬೆಂಗಳೂರನ್ನು ವಸೂಲಿ ಕೇಂದ್ರ ಮಾಡಿಕೊಂಡಿರುವ ಡಿಕೆಶಿ, ನಿಮ್ಮ ವಸೂಲಿ, ಧಮ್ಕಿ ಕೆಲಸ ಬಿಟ್ಟು ಬೆಂಗಳೂರನ ಗುಂಡಿ ಮುಚ್ಚಿ, ಕಸದ ಸಮಸ್ಯೆ ಬಗೆಹರಿಸಿ. ಸಿಲಿಕಾನ್ ಸಿಟಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಎಂದು ಜೆಡಿಎಸ್ ತಾಕೀತು ಮಾಡಿದೆ.
ಬಣ್ಣ ಬಣ್ಣದ ಬಟ್ಟೆ , ಕೂಲಿಂಗ್ ಗ್ಲಾಸ್ ಹಾಕಿ ಫೋಟೋ ಶೋಟ್, ರೀಲ್ಸ್ ಮಾಡಿದರೇ ಸಾಲದು, ಕೆಲಸವನ್ನೇ ಮಾಡದ ಬಾಯಿ ಮಾತಿನ ಶೂರ ಡಿಕೆಶಿ, “ಕೈಲಾಗದವರು ಮೈಪರಚಿ ಕೊಂಡಂತೆ ನಿಮ್ಮ ನಡೆ ನುಡಿ. “ಆಚಾರ ವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ” ಎಂದು ಜೆಡಿಎಸ್ ತರಾಟೆ ತೆಗೆದುಕೊಂಡಿದೆ.

