ಮೇ 12ರಂದು ಶಿವಶರಣ ಶಿವನಾಗಮಯ್ಯ ಅವರ ಜಯಂತ್ಯುತ್ಸವ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶಿವಶರಣರಾದ ಶಿವನಾಗಮಯ್ಯ  ಅವರ ಜಯಂತಿ(ಶರಣೋತ್ಸವ)ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ  ಬೃಹನ್ಮಠದ  ವತಿಯಿಂದ ಇದೇ ತಿಂಗಳ(12-5-2025) ಸೋಮವಾರ ಬೆಳಗಿನ 8-30ಗಂಟೆಯಿಂದ ಶ್ರೀಮಠದ ಮುರುಗಿಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ತಾಣದ ಆವರಣದಲ್ಲಿ ಏರ್ಪಡಿಸಲಾಗಿದೆ.

ಅಂದಿನ ಸಮಾರಂಭದ ಅಧ್ಯಕ್ಷತೆ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ವಿದ್ಯಾಪೀಠದ ಆಡಳಿತ ಮಂಡಳಿಯ ಅಧ್ಯಕ್ಷ ಶಿವಯೋಗಿ. ಸಿ. ಕಳಸದ್ ವಹಿಸಲಿದ್ದು ,

ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿ ಸಾನಿಧ್ಯದಲ್ಲಿ ನಡೆಯಲಿರುವ ನಗರದ  ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಔಷಧ ಮಹಾವಿದ್ಯಾಲಯ ಇವರ ನಿರ್ವಹಣೆಯಲ್ಲಿ ಸಮಾರಂಭ ಜರುಗಲಿದೆ.

 

Share This Article
error: Content is protected !!
";