ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ಸಂಘಗಳ ನೊಂದಣಿ ಅಧಿನಿಯಮ-1960 ರನ್ವಯ ನೊಂದಣಿಯಾದ ಸಂಘ-ಸಂಸ್ಥೆಗಳು ಕಲಂ-13ರನ್ವಯ ಪ್ರತಿ ವರ್ಷ ಜಿಲ್ಲಾ ನೊಂದಣಾಧಿಕಾರಿಗಳ ಕಚೇರಿಗೆ ಲೆಕ್ಕಪತ್ರಗಳನ್ನು ಸಲ್ಲಿಸಿ ದಾಖಲಿಸಬೇಕಾಗಿದೆ.
5 ವರ್ಷಕ್ಕೂ ಮೇಲ್ಪಟ್ಟು ಲೆಕ್ಕಪತ್ರಗಳನ್ನು ಸಲ್ಲಿಸಿ ದಾಖಲಿಸದೇ ಇರುವ ಸಂಘ-ಸಂಸ್ಥೆಗಳು ಲೆಕ್ಕಪತ್ರ ಮತ್ತು ಇತರೆ ಸಂಬಂಧಿಸಿದ ದಾಖಲೆಗಳನ್ನು 2025ರ ಡಿಸೆಂಬರ್ 31ರೊಳಗಾಗಿ ಸಲ್ಲಿಸಿ
ಪ್ರತಿ ವರ್ಷಕ್ಕೆ ರೂ.3000 ದಂತೆ ದಂಡ ಪಾವತಿಸಿ ದಾಖಲಿಸಿಕೊಳ್ಳಬಹುದು ಎಂದು ಜಿಲ್ಲಾ ನೋಂದಣಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಉಪನಿಬಂಧಕರು ತಿಳಿಸಿದ್ದಾರೆ.

