ಚಂದ್ರವಳ್ಳಿ ನ್ಯೂಸ್, ಮಂಡ್ಯ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡ್ಯದ ಮೈಶುಗರ್ ಫ್ಯಾಕ್ಟರಿಗೆ ಆಗಮಿಸಿ ವಾಪಸ್ಸು ಹೋಗುವಾಗ ಕೆಆರ್ಎಸ್, ಕಾವೇರಿ ನದಿ ನೀರು ಮತ್ತು ಸರ್ಕಾರದ ಬಹುಕೋಟಿ ಯೋಜನೆಗಳಿಗೆ ಸಂಬಂಧಿಸಿದಂತೆ ರೈತರು ಮತ್ತು ರೈತ ಮಹಿಳೆಯರು ವಿರೋಧಿಸಿದ್ದಲ್ಲದೆ ಆಕ್ರೋಶ ವ್ಯಕ್ತಪಡಿಸಿದರು.
ರೈತ ಮಹಿಳೆ, ಡಿಸ್ನಿ ಲ್ಯಾಂಡ್ ನಂಥ ಯೋಜನೆ ಮಂಡ್ಯದ ಜನತೆಗೆ ಅವಶ್ಯಕತೆ ಇಲ್ಲ, ಅಂಥ ವೈಭವೀಕೃತ ಯೋಜನೆಗಳು ಬೇಕಿಲ್ಲ.
ಸಿದ್ದರಾಮಯ್ಯ ಒಬ್ಬ ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವದ ಮುಖ್ಯಮಂತ್ರಿ ಎಂದು ಜನ ಭಾವಿಸಿದ್ದರು. ಅಂಥ ಮುಖ್ಯಮಂತ್ರಿಯಿಂದ 92 ಕೋಟಿ ವೆಚ್ಚದ ಕಾವೇರಿ ಆರತಿ ಯೋಜನೆ ಯಾಕೆ, ಜನರೆಲ್ಲರನ್ನು ಕರೆದೊಯ್ದು ಪೂಜೆ ಮಾಡಿಸ್ತೀರಾ ಎಂದು ಪ್ರಶ್ನಿಸಿದರು. ರೈತ ಮಹಿಳೆಯ ಪ್ರಶ್ನೆಗಳಿಗೆ ಮುಗುಳ್ನಗುವೊಂದೇ ಸಿದ್ದರಾಮಯ್ಯನವರ ಉತ್ತರವಾಗಿತ್ತು.