ಪಾಪರ್ ಸರ್ಕಾರ; ಶ್ರೀಮಂತ ಶಾಸಕರು!

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪಾಪರ್ ಸರ್ಕಾರ; ಶ್ರೀಮಂತ ಶಾಸಕರು! ವಿದೇಶ ಪ್ರವಾಸ ಕೈಗೊಂಡಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.

ಶಾಸಕರು ಗುಂಪುಗುಂಪಾಗಿ ವಾರಗಟ್ಟಲೆ ಫಾರಿನ್ ಟೂರ್ ಹೋಗೋದಕ್ಕೆ ದುಡ್ಡಿದೆ. ಸರ್ಕಾರಕ್ಕೆ 1000 ದಿನಗಳು ತುಂಬಿದ ಹಿನ್ನೆಲೆಯಲ್ಲಿ ಹತ್ತಾರು ಕೋಟಿ ಖರ್ಚು ಮಾಡಿ ಸಮಾವೇಶ ಮಾಡಲು ದುಡ್ಡಿದೆ. ಆದರೆ ಗುತ್ತಗೆದಾರರ ಬಾಕಿ ಬಿಲ್ ಪಾವತಿ ಮಾಡಲು ಮಾತ್ರ ಸರ್ಕಾರದ ಬಳಿ ದುಡ್ಡಿಲ್ಲ ಎಂದು ಅಶೋಕ್ ಟೀಕಿಸಿದ್ದಾರೆ.

- Advertisement - 

ಸಿಎಂ ಸಿದ್ದರಾಮಯ್ಯನವರೇ,ಗುತ್ತಿಗೆದಾರರ 37,000 ಕೋಟಿ ಬಿಲ್ ಪಾವತಿ ಮಾಡಲು ಯೋಗ್ಯತೆ ಇಲ್ಲದ ನಿಮ್ಮ ಕರ್ನಾಟಕ ಕಾಂಗ್ರೆಸ್ ಸರ್ಕಾರ, 4 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಿದರೆ ಏನು ಲಾಭ ಸ್ವಾಮಿ?

ಮಾರ್ಚ್ 6ರಿಂದ ರಾಜ್ಯದಲ್ಲಿ ಎಲ್ಲ ಕಾಮಗಾರಿಗಳು ಬಂದ್ ಆಗಲಿವೆ. ತಾವೂ ಸಹ ಕೆಲಸಕ್ಕೆ ಬಾರದ ಬಜೆಟ್ ಮಂಡನೆ ಮಾಡುವ ಬದಲು ಅಂದೇ ರಾಜೀನಾಮೆ ಕೊಟ್ಟು ನಿರ್ಗಮಿಸಿದರೆ, ಅದೇ ಕನ್ನಡಿಗರಿಗೆ ತಾವು ಮಾಡಬಹುದಾದ ದೊಡ್ಡ ಸೇವೆ, ದೊಡ್ಡ ಉಪಕಾರ ಎಂದು ಸಿದ್ದರಾಮಯ್ಯಗೆ ಅಶೋಕ್ ತಾಕೀತು ಮಾಡಿದ್ದಾರೆ.

- Advertisement - 

 

 

Share This Article
error: Content is protected !!
";