ರಂಗೇನಹಳ್ಳಿ ಕೆರೆ ಭರ್ತಿ, ಕಣ್ತುಂಬಿಕೊಂಡ ಜನತೆ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲ್ಲೂಕಿನ ರಂಗೇನಹಳ್ಳಿ ಕೆರೆಯು ಕೋಡಿ ಬಿದ್ದಿದ್ದು
, ಕೋಡಿ ಹರಿಯುವುದನ್ನು  ನೋಡಲು ನೂರಾರು ಜನರು ತಮ್ಮ ವಾಹನಗಳ ಮೂಲಕ ಕುಟುಂಬವರ ಜೊತೆ, ಸ್ನೇಹಿತರ ಜೊತೆ ಗುಂಪುಗುಂಪಾಗಿ ಬಂದು ಕೆರೆ ಕೋಡಿ ಬಿದ್ದಿರುವ ದೃಶ್ಯವನ್ನು ಕಣ್ತುಂಬಿಕೊಂಡರು. 

ಈ ವೇಳೆ ರೈತ ಮಹಿಳೆಯರಾದ ಭಾಗ್ಯಮ್ಮ, ಪುಟ್ಟಮ್ಮ, ಕೆಂಚಮ್ಮ, ಲಕ್ಷ್ಮಕ್ಕ, ಪಾರ್ವತಮ್ಮ, ಗಡಾರಿ ಕೃಷ್ಣಪ್ಪ, ಹಿರಿಯೂರು ತಾಲ್ಲೂಕು ಭಾರತೀಯ ಕಿಸಾನ್ ಸಂಘದ ಅಧ್ಯಕ್ಷರು ಹಾಗೂ ಕುಂಚಿಟಿಗರ ಸಂಘದ ಗೌರವಾಧ್ಯಕ್ಷರಾದ ತಿಮ್ಮಣ್ಣ, ಶಿಕ್ಷಕರು, ಪೋಲಿಸರು  ಸೇರಿದಂತೆ ಅನೇಕ ಸಾರ್ವಜನಿಕರು, ಗ್ರಾಮಸ್ಥರು ವೀಕ್ಷಣೆ ಮಾಡಿದರು.   

 

Share This Article
error: Content is protected !!
";