ಚಂದ್ರವಳ್ಳಿ ನ್ಯೂಸ್, ಉಡುಪಿ:
ಉಡುಪಿಯಲ್ಲಿ ಆಯೋಜಿಸಲಾಗಿರುವ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು. ಮಕ್ಕಳು ಬಿಡಿಸಿರುವ ಭಾವಚಿತ್ರಗಳನ್ನು ಸಂಗ್ರಹಿಸಿ ಕಳುಹಿಸುವಂತೆ ಎಸ್ಪಿಜಿ, ಸಂಘಟಕರು ಹಾಗೂ ಸ್ಥಳೀಯ ಪೊಲೀಸರಲ್ಲಿ ಮನವಿ ಮಾಡಿದರು.
ಚಿತ್ರಗಳ ಹಿಂಭಾಗದಲ್ಲಿ ಮಕ್ಕಳು ತಮ್ಮ ವಿಳಾಸಗಳನ್ನು ಬರೆದರೆ, ತಾವೇ ಅವರಿಗೆ ಧನ್ಯವಾದ ಪತ್ರವನ್ನು ವೈಯಕ್ತಿಕವಾಗಿ ಕಳುಹಿಸುವುದಾಗಿ ಪ್ರಧಾನಿ ತಿಳಿಸಿದರು.
ಮೋದಿ ಅವರು ಮಕ್ಕಳ ಪ್ರಯತ್ನಗಳನ್ನು ಶ್ಲಾಘಿಸಿದರಲ್ಲದೆ ಮಕ್ಕಳಿಗೆ ಅನ್ಯಾಯವಾದರೆ ತಮಗೆ ದುಃಖವಾಗುತ್ತದೆ ಎಂದು ತಿಳಿಸಿದರು.

