ಪ್ರತಿಭಾವಂತರಿಗೆ ಸೂಕ್ತ ವೇದಿಕೆ, ಪ್ರೋತ್ಸಾಹ ಅಗತ್ಯ-ಪಿ. ಎನ್. ಶೇಷಾದ್ರಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಪ್ರತಿಭಾವಂತ ಕಲಾವಿದರಿಗೆ
  ಸೂಕ್ತ ವೇದಿಕೆ  ಮತ್ತು ಪ್ರೋತ್ಸಾಹ ನೀಡಿದಾಗ  ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪಿ.ಎನ್.ಶೇಷಾದ್ರಿ ತಿಳಿಸಿದರು.

       ನಗರದ ಸರ್ಕಾರಿ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ  ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ   ರಾಜ್ಯಮಟ್ಟದಲ್ಲಿ  ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಪ್ರತಿಯೊಬ್ಬರಲ್ಲೂ ಒಂದಲ್ಲೊಂದು  ಪ್ರತಿಭೆ  ಇರುತ್ತದೆ. ಅದಕ್ಕೆ ಸಕಾಲದಲ್ಲಿ  ಪ್ರೋತ್ಸಾಹ  ದೊರೆತರೆ ಅವರು ಸಾಧಕರಾಗಲು ಸಾಧ್ಯವಾಗುತ್ತದೆ. ಸಾಧಕರು ತಮ್ಮ ಅನುಭವ ಮತ್ತು ಯಶಸ್ಸಿನ ಹಾದಿಯನ್ನು ಮುಂದಿನ ಪೀಳಿಗೆಗೆ  ಹಂಚಿಕೊಳ್ಳುವ ಮೂಲಕ ಸಮಾಜಮುಖಿಗಳಾಗಿ ಬದುಕಬೇಕು ಎಂದರು.

- Advertisement - 

     ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಎ.ಜಯರಾಮ್ ಮಾತನಾಡಿ, ನಮ್ಮ ಜನಪದರ ಪ್ರತಿಭೆ  ವೈವಿಧ್ಯಮಯ.  ಅಕ್ಷರಸ್ಥರಲ್ಲದಿದ್ದರೂ, ಸಾವಿರಾರು ತ್ರಿಪದಿಗಳು, ಲಾವಣಿಗಳು, ಗಾದೆಗಳು ಮತ್ತು ಕಥೆಗಳನ್ನು ಕೇವಲ ನೆನಪಿನ ಶಕ್ತಿಯಿಂದ ತಲೆಮಾರಿನಿಂದ ತಲೆಮಾರಿಗೆ ದಾಟಿಸಿದ್ದಾರೆ. ಅವರ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ಮತ್ತು ಬದುಕಿನ ಸಾರ ಅಡಗಿದೆ.  ನಮ್ಮ ಶ್ರೀಮಂತ ಜಾನಪದ ಪರಂಪರೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಆಗಬೇಕಾಗಿದೆ ಎಂದರು.

     ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಕಸಬಾ ಹೋಬಳಿ ಕಸಾಪ ಕೋಶಾಧ್ಯಕ್ಷ  ಜಿ.ಸುರೇಶ್, ಜ್ಞಾನಗಂಗಾ ಪ್ರೌಢಶಾಲೆಯ ಶಿಕ್ಷಕ ಕೋದಂಡರಾಮ್ವಿವಿಧ  ವಿದ್ಯಾರ್ಥಿನಿಲಯಗಳ  ನಿಲಯಪಾಲಕರುಗಳಾದ  ರಾಧಾಮಣಿ, ರೂಬಿಯಾ, ಶಿವಪ್ಪ, ಸಿ.ಅಣ್ಣಯ್ಯ, ಸತೀಶ್ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

- Advertisement - 

 

Share This Article
error: Content is protected !!
";