ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲ್ಲೂಕು ವ್ಯಾಪ್ತಿಯಲ್ಲಿ ಇದೇ ನ.18ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
66/11 ಕೆವಿ ಹಿರಿಯೂರು, ಭರಂಗಿರಿ ಮತ್ತು ಐಮಂಗಲ ವಿ.ವಿ ಕೇಂದ್ರಗಳಲ್ಲಿ 3ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಇರುವ ಪ್ರಯುಕ್ತ ವಿದ್ಯುತ್ ವ್ಯತ್ಯಯವಾಗಲಿದೆ.
ಹಿರಿಯೂರು ಪಟ್ಟಣದ ಅವಧಾನಿ ನಗರ, ತಾಲ್ಲೂಕು ಕಚೇರಿ, ತಾಲ್ಲೂಕು ಕಚೇರಿ ಸುತ್ತಮುತ್ತ, ಆಜಾದ್ ನಗರ, ಚಿಕ್ಕಪೇಟೆ, ತೇರುಮಲ್ಲೇಶ್ವರ ದೇವಸ್ಥಾನ ಸುತ್ತಮುತ್ತ, ಗಾಂಧಿವೃತ್ತ, ಹುಳಿಯೂರು ರಸ್ತೆಯ ಹರಿಶ್ಚಂದ್ರ ಘಾಟ್ ಸುತ್ತಮುತ್ತ, ಲಕ್ಕವ್ವನಹಳ್ಳಿ, ದೊಡ್ಡಘಟ್ಟ, ಸೀಗೇಹಟ್ಟಿ ಕೂನಿಕೆರೆ, ಕೂನಿಕೆರೆ ಕಾವಲ್, ಯರಕೇನಾಗೇನಹಳ್ಳಿ, ಎವಿ ಕೊಟ್ಟಿಗೆ,
ಭರಂಗಿರಿ ತಳವಾರಹಟ್ಟಿ, ವಿವಿ ಪುರ ಮೇಕೇನಹಳ್ಳಿ, ಬೀರೇನಹಳ್ಳಿ, ಗೌನಹಳ್ಳಿ ಗುಡಿಹಳ್ಳಿ, ಭೂತಯ್ಯನಹಟ್ಟಿ, ಗೂಗುದ್ದು ಕುಂಟಪ್ಪನಹಟ್ಟಿ, ಐಮಂಗಲ, ಮರಡಿಹಳ್ಳಿ, ಭರಂಪುರ ಕಲ್ಲಹಟ್ಟಿ, ಸಿ.ಎನ್.ಮಾಳಿಗೆ, ಬುರುಜನರೊಪ್ಪ, ಮೇಟಿಕುರ್ಕೆ, ಎಸ್.ಜಿ.ಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮದ ಗ್ರಾಹಕರು, ರೈತರು, ಸಾರ್ವಜನಿಕರು ಸಹಕರಿಸಬೇಕು ಎಂದು ಹಿರಿಯೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹೆಚ್.ಪೀರ್ಸಾಬ್ ತಿಳಿಸಿದ್ದಾರೆ.

