ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕಾಶ್ಮೀರದಲ್ಲಿ ನೆಡೆದ ಭಯೋತ್ಪಾದಕರ ಭಾರತೀಯ ನಾಗರಿಕರ ಮೇಲೆ ದಾಳಿ ಮಾಡಿ ನರಮೇಧದಿಂದ ನಮ್ಮದೇಶದ ಹೆಣ್ಣು ಮಕ್ಕಳ ಹರಿಸಿ ಕುಂಕುಮ ಅಳಿಸಿದ ಉಗ್ರರನ್ನು ನಮ್ಮನ್ನು ಕೊಂದು ಹಾಕಿ ಎಂದು ಕೇಳಿದ್ದಕ್ಕೆ ನಿಮ್ಮ ಪ್ರಧಾನಿ ಮೋದಿಯವರಿಗೆ ಹೇಳಿ ಅವರು ನಿಮ್ಮ ಕೊಲ್ಲುತ್ತಾರೆ ಎಂದು ಉತ್ತರ ಕೊಟ್ಟ ಉಗ್ರರರಿಗೆ ಮೇ 07 ರಂದು ನೆಡೆದ ಅಪರೇಷನ್ ಸಿಂಧೂರ ವೈಮಾನಿಕ ದಾಳಿಯಿಂದ ಪಾಕಿಸ್ತಾನದ ಉಗ್ರರನ್ನು ಕೊಂದು ಹಾಕಿದ ಭಾರತೀಯ ಸೇನೆಗೆ ನಮ್ಮ ಸಲಾಂ ಎಂದು ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭಾರತದ ಭ್ರಷ್ಟಾಚಾರ ವಿರೋಧಿ ಮಂಡಳಿ ರಾಷ್ಟ್ರೀಯ ಅಧ್ಯಕ್ಷ ರಾಜಗೋಪಾಲ್ ತಿಳಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭಾರತದ ಭ್ರಷ್ಟಾಚಾರ ವಿರೋಧಿ ಮಂಡಳಿ ಪ್ರದಾನ ಕಾರ್ಯದರ್ಶಿ ದೇವರಾಜ್ ಪತ್ರಕರ್ತ ಬೀದಿ ಮನೆ ರಮೇಶ್ ಹಾಗು ಕಾರ್ಯಕರ್ತರು ಹಾಜರಿದ್ದರು.
ಭಯೋತ್ಪಾದಕರನ್ನು ದಮನ ಮಾಡಿ ದೇಶದ ಶಾಂತಿಗೆ ಮುಂದಾಗುತ್ತಿರುವ ನಮ್ಮ ಹೆಮ್ಮೆಯ ದೇಶದ ಸೈನಿಕರಿಗೆ ಶಕ್ತಿ ತುಂಬಲು ಅವರ ಶ್ರೇಯಸ್ಸಿಗಾಗಿ ಅ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ರುದ್ರೇಶ್ ಕುಮಾರ್ ತಿಳಿಸಿದ್ದಾರೆ.