ಬೆಲೆ ಏರಿಕೆಗಳು, ತುಷ್ಟೀಕರಣ, ಹನಿ ಟ್ರಾಪ್ ಬಗ್ಗೆ ಹರಿಹಾಯ್ದ ನಿಖಿಲ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು, ಕೇಂದ್ರ ಕಚೇರಿ ಜೆ.ಪಿ. ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆಗಳು, ಒಂದು ಸಮುದಾಯದ ತುಷ್ಟೀಕರಣ, ಹನಿ ಟ್ರಾಪ್ ಸೇರಿದಂತೆ ಹಲವು ದುರಾಡಳಿತದ ಬಗ್ಗೆ ಪ್ರಸ್ತಾಪಿಸಿದರು. 

ಕಾಂಗ್ರೆಸ್ ಸರ್ಕಾರ, ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಾ ಒಂದು ಸಮುದಾಯದ ಓಲೈಕೆಗಾಗಿ  ಗುತ್ತಿಗೆಯಲ್ಲಿ ೪% ಮೀಸಲಾತಿ ‌ಕೊಟ್ಟು, ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡುಉಳಿದ ಸಮುದಾಯಗಳಿಗೆ ತಾರತಮ್ಯ ಎಸಗಿದೆ. ಪ್ರತಿ ದಿನ ಜನರಿಗೆ ದರ ಏರಿಕೆಯ ಬರೆ ಎಳೆಯುತ್ತಿರುವ ರಾಜ್ಯ ಸರ್ಕಾರದ ಬೆಲೆ ಏರಿಕೆ ಖಂಡಿಸಿ ದೊಡ್ಡ ಮಟ್ಟದ ಹೋರಾಟ ಮಾಡುವುದಾಗಿಯೂ ತಿಳಿಸಿದರು.

 

Share This Article
error: Content is protected !!
";