ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
‘ಸಿದ್ದರಾಮಯ್ಯ ಅವರೇ, ಎಂತಹ ಸಚಿವರನ್ನು ಸಂಪುಟದಲ್ಲಿ ಇಟ್ಟುಕೊಂಡಿದ್ದೀರಾ ಸ್ವಾಮಿ ! ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.
“ಸುಸೈಡ್ ಬಾಂಬರ್” ಆಗಲು ರೆಡಿ ಎನ್ನುವ ಸಚಿವ ಜಮೀರ್ ಅಹಮದ್ ಖಾನ್ ದೇಶದ ಜನರಿಗೆ ಯಾವ ರೀತಿಯ ಸಂದೇಶ ನೀಡುತ್ತಿದ್ದಾರೆ ?
ಉಗ್ರ ಸಂಘಟನೆಗಳು ಮಾತ್ರ ಸುಸೈಡ್ ಬಾಂಬರ್ ಗಳನ್ನು ಬಳಸಿ ಭಯೋತ್ಪಾದಕ ದಾಳಿ ನಡೆಸುತ್ತವೆ. ಮಂತ್ರಿಯಾಗಿರುವ ಜಮೀರ್ ಯಾರನ್ನು ಪ್ರೇರೇಪಿಸಲು, ಪ್ರಚೋದಿಸಲು ಆತ್ಮಾಹುತಿ ಬಾಂಬರ್ ಆಗುತ್ತೇನೆ ಎಂದು ಹೈಲು ಪೈಲು ಹೇಳಿಕೆ ನೀಡುತ್ತಿದ್ದಾರೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಸಚಿವ ಜಮೀರ್ ಹೇಳಿಕೆ ಬಗ್ಗೆ ನಿಮ್ಮ ನಿಲುವು ಏನು ಸ್ಪಷ್ಟಪಡಿಸುವಿರಾ ಮುಖ್ಯಮಂತ್ರಿಗಳೆ! ಎಂದು ಜೆಡಿಎಸ್ ಪ್ರಶ್ನಿಸಿದೆ.