ದುರಸ್ತಿ ಮಾಡಿ ಮರು ಜೀವ ಪಡೆದ ಸರ್ಕಾರಿ ಶಾಲೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಸುಮಾರು
4.90 ಲಕ್ಷ ರೂಪಾಯಿಗಳ ಜಿಲ್ಲಾಪಂಚಾಯಿತಿ ಅನುದಾನದಲ್ಲಿ ಶಾಲೆಯ ದುರಸ್ತಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಶಾಸಕ ಧೀರಜ್ ಮುನಿರಾಜು ಕಾಮಗಾರಿಗೆ ಚಾಲನೆ ನೀಡಿದರು.

 ತಾಲೂಕಿನ ಕೊನಘಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ದುರಸ್ತಿಗಾಗಿ ಜಿಲ್ಲಾಪಂಚಾಯಿತಿ ಅನುದಾನ ದೊರೆತಿದ್ದು, ಸದರಿ ಕಾಮಗಾರಿಯ ಚಾಲನೆಯನ್ನು ಶಾಸಕರು ಮುಖಂಡರೊಂದಿಗೆ ಗುದ್ದಲಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು  ಕಾಮಗಾರಿಗೆ ಚಾಲನೆ ನೀಡಿದರು.

 ಈ ಸಂದರ್ಭದಲ್ಲಿ ಶಾಸಕ ಧೀರಜ್ ಮುನಿರಾಜು ಮಾತನಾಡಿ ಸಾವಿರಾರು ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಿರುವ ಕೋನಘಟ್ಟ ಸರ್ಕಾರಿ  ಹಿರಿಯ ಪ್ರಾಥಮಿಕ ಪಾಠಶಾಲೆಯ ದುರಸ್ತಿ ಕಾರ್ಯಕ್ಕೆ  ಜಿಲ್ಲಾ ಪಂಚಾಯತ್ ವತಿಯಿಂದ  ಅನುದಾನ ದೊರೆತಿರುವುದು  ಸಂತಸದ ವಿಷಯವಾಗಿದೆ. ದುರಸ್ತಿ ಕಾಮಗಾರಿ ಶೀಘ್ರಗತಿಯಲ್ಲಿ ಪೂರ್ಣಗೊಂಡು ಶಾಲೆ ಮತ್ತೊಷ್ಟು ಮಕ್ಕಳ ಉಜ್ವಲ ಭವಿಷ್ಯಕ್ಕೆ ದಾರಿದೀಪವಾಗಲಿ ಎಂದು ಶುಭ ಹಾರೈಸಿದರು.

 ಈ ಸಂದರ್ಭದಲ್ಲಿ ಕೊನಘಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷೆ ಜ್ಯೋತಿ ರಮೇಶ್, ಸದಸ್ಯರಾದ ಮಂಜುನಾಥ, ಆರಾಧ್ಯ, ಅಶ್ವತ್ಥಪ್ಪ, ಬಾಲರಾಜ್,ಮುಖಂಡರಾದ ದೊಡ್ಡ ಬಚ್ಚಪ್ಪ, ಕೆಕೆ ಆಂಜಿನಪ್ಪ, ಶಿವಣ್ಣ, ರಾಮಣ್ಣ, ಕೆ.ಎಂ ರಾಮಂಜಿನಪ್ಪ, ಎಂಪಿಸಿಎಸ್ ನಿರ್ದೇಶಕ ಗೋವಿಂದ್ ಸ್ವಾಮಿ, ಬಿಜೆಪಿ ಮಂಡಲ ಉಪಾಧ್ಯಕ್ಷ ನಾಗೇಶ್, ಟಿಎಪಿಎಂಸಿ ನಿರ್ದೇಶಕ ಬೀರೇಶ್, ವಿಎಸ್ಎಸ್ಎನ್ ನಿರ್ದೇಶಕ,

ಎಸ್‌ಡಿಎಂಸಿ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ಬೈರಪ್ಪ, ನಾಮಿನಿ ತಾಯೆಗೌಡ ಮತ್ತು ಬಸವರಾಜ್, ಪ್ರಭಾಕರ್ ಹಾಗೂ ಶಾಲಾ ಸಿಬ್ಬಂದಿ ಊರಿನ ಪ್ರಮುಖರು ಉಪಸ್ಥಿತರಿದ್ದರು.

 

Share This Article
error: Content is protected !!
";