ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಆಶ್ರಮದ ಅಧ್ಯಕ್ಷೆ ಮಾತಾಜೀ ತ್ಯಾಗಮಯೀ ಅವರ ಸಾನಿಧ್ಯದಲ್ಲಿ ಸಾಮೂಹಿಕ 1108 ಶಿವನಾಮ ಸ್ಮರಣೆಯೊಂದಿಗೆ ಬಿಲ್ವಾರ್ಚನೆ ಮತ್ತು ಶಿವನ ಭಜನೆ, ದಿವ್ಯತ್ರಯರಿಗೆ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು.
ಅರ್ಚನಾ ಕಾರ್ಯಕ್ರಮದಲ್ಲಿ ಎಚ್ ಲಕ್ಷ್ಮೀದೇವಮ್ಮ, ರಾಘವೇಂದ್ರ,ಎಂ ಗೀತಾ ನಾಗರಾಜ್, ಕವಿತಾ, ವನಜಾಕ್ಷಿ ಮೋಹನ್, ಮಾನ್ಯ, ಯತೀಶ್ ಎಂ ಸಿದ್ದಾಪುರ, ಚೆನ್ನಕೇಶವ, ಚೇತನ್, ಸರಸ್ವತಿ, ಡಾ.ಭೂಮಿಕಾ, ಪಂಕಜಾ ಚೆನ್ನಪ್ಪ, ಸೌಮ್ಯ ಪ್ರಸಾದ್, ನಾಗರತ್ನಮ್ಮ, ಮಂಜುಳಾ ಉಮೇಶ್, ಸಿ.ಎಸ್.ಭಾರತಿ, ರಶ್ಮಿ ವಸಂತ, ಯಶಸ್ವಿ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.

