ಬ್ರಿಟಿಷ್ ಸರ್ವಾಧಿಕಾರಿ ಸಾಮ್ರಾಜ್ಯದ ನೇಣುಕುಣಿಕೆಗೆ ಕೊರಳೊಡ್ಡಿದ ಮಹಾನ್ ದೇಶಭಕ್ತ ಸಂಗೊಳ್ಳಿ ರಾಯಣ್ಣ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅವರ ಹುತಾತ್ಮ ದಿನವಾದ ಇಂದು ಅವರ ವಿಚಾರಗಳನ್ನು ನೆನೆದು ಅವರಿಗೆ ಗೌರವ ಪೂರ್ವಕವಾದ ನಮನಗಳನ್ನು ಅರ್ಪಿಸೋಣ.

ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಬದುಕು ಸಮರ್ಪಿಸಿ, ತನ್ನ 32ನೇ ವಯಸ್ಸಿಗೆ ಬ್ರಿಟಿಷ್ ಸರ್ವಾಧಿಕಾರಿ ಸಾಮ್ರಾಜ್ಯದ ನೇಣುಕುಣಿಕೆಗೆ ಕೊರಳೊಡ್ಡಿದ ಮಹಾನ್ ದೇಶಭಕ್ತ ಸಂಗೊಳ್ಳಿ ರಾಯಣ್ಣ ಈ ನೆಲದ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿದ್ದಾರೆ.

ಗುಲಾಮಗಿರಿಯ ಕಗ್ಗತ್ತಲಲ್ಲಿ ನರುಳುತ್ತಿದ್ದ ಭಾರತೀಯರನ್ನು ಸ್ವಾತಂತ್ರ್ಯವೆಂಬ ಬೆಳಕಿನೆಡೆಗೆ ಮುನ್ನಡೆಸಿದ ಸಂಗೊಳ್ಳಿ ರಾಯಣ್ಣನ ಸ್ವಾಮಿ ನಿಷ್ಠೆ, ಸಮರ್ಪಣಾಭಾವವನ್ನು ಅವರ ಪುಣ್ಯಸ್ಮರಣೆಯ ದಿನ ಗೌರವದಿಂದ ನೆನೆದು, ನಮಿಸೋಣ.
ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿರಾಯಣ್ಣನವರು ಬ್ರಿಟಿಷ್ ಸರ್ಕಾರದ ವಿರುದ್ಧ ಹೋರಾಟ ಮಾಡಿದ ವೀರ ಕನ್ನಡಿಗ
, ವೀರ ರಾಣಿ ಕಿತ್ತೂರು ರಾಣಿ ಚೆನ್ನಮ್ಮನವರ ರಾಜರ ಆಸ್ಥಾನದಲ್ಲಿ ಸೇನಾಪತಿ ಸ್ಥಾನ ಅಲಂಕರಿಸಿದ್ದರು. ರಾಣಿ ಚೆನ್ನಮ್ಮನಿಗೆ ಬಲಗೈ ಬಂಟರಾಗಿ ಗುರುತಿಸಿಕೊಂಡಿದ್ದರು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ದೊಡ್ಡ ಪ್ರಮಾಣದ ಹೋರಾಟ  ಮಾಡಿದ ಅಪ್ರತಿಮ ದೇಶ ಭಕ್ತ.

 ಸಂಗೊಳ್ಳಿರಾಯಣ್ಣ ಅವರ ಕೊನೆ ಉಸಿರಿನವರೆಗೂ ಬ್ರಿಟಿಷ್ ಸರ್ಕಾರದ ವಿರುದ್ಧ ವಿವಿಧ ಬಗೆಯ ಹೋರಾಟ ನಡೆಸಿ ಬ್ರಿಟಿಷರಿಗೆ ನಿದ್ದೆ ಕೆಡಿಸಿದ ಜಗದೇಕ ವೀರಸ್ವಾತಂತ್ರ್ಯ ಹೋರಾಟದ ಯುದ್ಧಗಳಲ್ಲಿ ಇವರ ಪರಾಕ್ರಮದ ಶೌರ್ಯಕ್ಕೆ ರಾಯಣ್ಣನಿಗೆ ಕ್ರಾಂತಿವೀರ ಎಂಬ ಬಿರುದು ಲಭಿಸಿತು.

ಜನವರಿ 26ರ ಈ ದಿನದಂದು ದೇಶದ ಗಣರಾಜ್ಯೋತ್ಸವ ಈ ದಿನದಲ್ಲಿ  ಸಂಗೊಳ್ಳಿರಾಯಣ್ಣ ಅವರ ಬಲಿದಾನ ದಿನವಾಗಿ ಆಚರಿಸಿ ಅವರನ್ನು ಸ್ಮರಣೆ ಮಾಡುವ ಮೂಲಕ ಗೌರವಿಸಲಾಗುವುದು. ಇತ್ತಿಚಿನ ಕೆಲವು ವರ್ಷಗಳ ಹಿಂದೆ  ಕನ್ನಡ ಚಿತ್ರರಂಗದಲ್ಲಿ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಎಂಬ ಸಿನಿಮಾ ತಯಾರಿಸಿದರು ಆ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡಿರುವ ವಿಚಾರವನ್ನು ಈ ಸಮಯದಲ್ಲಿ ನೆನೆಯೋಣ.
ಲೇಖನ-ರಘುಗೌಡ, ಕೆಟಿಹಳ್ಳಿ.

Share This Article
error: Content is protected !!
";