ಒಳ್ಳೆಯ ಉದ್ದೇಶಕ್ಕೆ ಪ್ರಗತಿ ನಿಧಿ ಬಳಸಿ: ಸತೀಶ್ ಶೆಟ್ಟಿ 

News Desk

ಚಂದ್ರವಳ್ಳಿ ನ್ಯೂಸ್, ಹೊಸಪೇಟೆ:
ವಿಜಯನಗರ
 ನಗರದ ಚಿತ್ರಕೇರಿ ಕಾರ್ಯಕ್ಷೇತ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ 300000 ರೂ ಪ್ರಗತಿ ನಿಧಿ ಪಡೆದುಕೊಂಡು  ಹೊಸದಾಗಿ ಆಟೋರಿಕ್ಷಾ ಖರೀದಿ ಮಾಡಿದಂತಹ ಸಂಸ್ಥೆಯ ಪಾಲುದಾರ ಸದಸ್ಯೆ ಪ್ರೇಮ ಅವರಿಗೆ ಸಂಸ್ಥೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ   ಅವರು ಈ ಹಸ್ತಾಂತರ ಮಾಡಿದರು.

- Advertisement - 

ಈ ಸಂದರ್ಭದಲ್ಲಿ ಅವರು ಮಾತನಾಡಿ ಪ್ರತಿಯೊಬ್ಬ ಪಾಲುದಾರ ಸದಸ್ಯರು ಕೂಡ ಇವರ ಹಾಗೆ ಸಂಘದಿಂದ ಪಡೆದುಕೊಂಡ ಪ್ರಗತಿ ನಿಧಿಯನ್ನು ಒಳ್ಳೆಯ ಉದ್ದೇಶಕ್ಕೆ ಬಳಕೆ ಮಾಡಿಕೊಂಡರೆ ಪ್ರಗತಿ ನಿಧಿ ಶಬ್ದಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ತಿಳಿಸಿದರು.

- Advertisement - 

ಸದರಿ ಸದಸ್ಯರಿಗೆ ಒಳ್ಳೆಯ ಆದಾಯ ಲಭಿಸಲಿ ಮತ್ತು ಅವರ ಕುಟುಂಬಕ್ಕೆ ಮಂಜುನಾಥ ಸ್ವಾಮಿಯ ಹಾಗೂ ಪರಮಪೂಜ್ಯ ಖಾವಂದರ ಆಶೀರ್ವಾದ ಸದಾ ಕಾಲ ಇರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಎಂಐಎಸ್ ಯೋಜನಾಧಿಕಾರಿ ಶಿಲ್ಪ
, ತಾಲೂಕು ಯೋಜನಾಧಿಕಾರಿ ಮಾರುತಿ.ಎಸ್, ಹಣಕಾಸು ಪ್ರಬಂಧಕ ಸುನಿಲ್ ವಲಯದ ಮೇಲ್ವಿಚಾರಕ ಶರಣ ಬಸವ ಉಪಸ್ಥಿತರಿದ್ದರು. 

- Advertisement - 
Share This Article
error: Content is protected !!
";