ಎಸ್‌ಸಿ-ಎಸ್‌ಟಿ ನಾಯಕರು ಸಭೆ ಸೇರುವುದಕ್ಕೂ ಇಟಲಿ ಕಾಂಗ್ರೆಸ್ ಅಪ್ಪಣೆ ಬೇಕಾ?

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಂವಿಧಾನ ರಕ್ಷಿಸುತ್ತೇವೆ ಎಂದು ಸಂವಿಧಾನ ಪುಸ್ತಕ ಹಿಡಿದು ಸಂಸತ್ತಿನಲ್ಲಿ ಶೋ ಆಫ್‌ಕೊಡುವ ಇಟಲಿ ಮೂಲದ ಕಾಂಗ್ರೆಸ್‌ವರಿಷ್ಠರೇ
, ಎಸ್‌ಸಿ- ಎಸ್‌ಟಿ ಜನರ ಸಮಸ್ಯೆಗಳ ಪರ ಧ್ವನಿ ಎತ್ತುವ ನಾಯಕರನ್ನು ತುಳಿಯುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಜೆಡಿಎಸ್ ವಾಕ್ಸಮರ ಸಾರಿದೆ.

ರಾಜ್ಯದಲ್ಲಿ ಎಸ್‌ಸಿ-ಎಸ್‌ಟಿ ನಾಯಕರು ಸಭೆ ಸೇರುವುದಕ್ಕೂ ಇಟಲಿ ಕಾಂಗ್ರೆಸ್ ಅಪ್ಪಣೆ ಬೇಕಾ? ಹೈಕಮಾಂಡ್‌ಹೇಳಿ-ಕೇಳಿಯೇ ಸಭೆ-ಸಮಾರಂಭಗಳನ್ನು ಮಾಡಬೇಕಾ ? ಎಂದು ಜೆಡಿಎಸ್ ಖಾರವಾಗಿ ಪ್ರಶ್ನಿಸಿದೆ.

- Advertisement - 

ಪರಿಶಿಷ್ಟ ಸಮುದಾಯಗಳ ಸಮಸ್ಯೆಗಳ ಪರವಾಗಿ ಧ್ವನಿ ಎತ್ತುವ ಸಲುವಾಗಿ ಚರ್ಚೆ ಮಾಡುವುದೂ ಮಹಾ ಅಪರಾಧವೇ ? ಸಭೆ ಮಾಡಬಾರದು ಎನ್ನುವ ವರಿಷ್ಠರ ಸೂಚನೆ ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡಗಳ ಜನರಿಗೆ ಮಾಡುತ್ತಿರುವ ಅಪಮಾನ ಅಲ್ಲವೇ ?‌ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.

ಇಟಲಿ ಕೇಂದ್ರಿತ ವರಿಷ್ಠರು ರಾಜ್ಯ ಕಾಂಗ್ರೆಸ್‌ನಾಯಕರನ್ನು ಗುಲಾಮರಂತೆ ಇಷ್ಟು ಕೀಳು ಮಟ್ಟದಲ್ಲಿ ನಡೆಸಿಕೊಳ್ಳುತ್ತಿರುವುದು ಸರಿಯಲ್ಲ. ದಲಿತ ನಾಯಕರ ಅಧಿಕಾರ, ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವುದು ಯಾವ ರೀತಿಯಲ್ಲಿ ಸಂವಿಧಾನ ರಕ್ಷಣೆಯಾಗಿದೆ. 

- Advertisement - 

ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್‌ಬಿ.ಆರ್‌. ಅಂಬೇಡ್ಕರ್‌ಅವರನ್ನು ಹೀನಾಯವಾಗಿ ನಡೆಸಿಕೊಂಡು, ರಾಜಕೀಯವಾಗಿ ತುಳಿದ ಇಟಲಿ ಕಾಂಗ್ರೆಸ್ಸಿಗರಿಂದ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ.! ಎಂದು ಜೆಡಿಎಸ್ ವ್ಯಂಗ್ಯವಾಡಿದೆ.

 

Share This Article
error: Content is protected !!
";