ಗುಂಡಿಗೆ ಬಿದ್ದ ಶಾಲಾ ಮಕ್ಕಳ ಬಸ್‌, ಆತಂಕದಲ್ಲಿ ಮಕ್ಕಳ ಜೀವ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಶಾಲಾ ಮಕ್ಕಳು ಜೀವ ಪಣಕ್ಕಿಟ್ಟು ಓಡಾಡುವಂತಾಗಿದೆ. 20 ಮಕ್ಕಳಿದ್ದ ಶಾಲಾ ಬಸ್‌ಗುಂಡಿಗೆ ಬಿದ್ದಿದೆ.

ಸಿಲಿಕಾನ್‌ ಸಿಟಿ ಬೆಂಗಳೂರನ್ನು “ಗುಂಡಿಯೂರು” ಮಾಡಿದ್ದೇ ಡಿಸಿಎಂ ಡಿ.ಕೆ ಶಿವಕುಮಾರ್ ಸಾಧನೆ. ಮೂಲಸೌಕರ್ಯವನ್ನೇ ಕಾಣದೇ ಗುಂಡಿ ಬಿದ್ದಿರುವ ರಸ್ತೆಗಳಿಗೆ ತೇಪೆ ಹಾಕುವುದನ್ನೇ ಅಭಿವೃದ್ಧಿ ಎಂದು ಬಿಂಬಿಸಿಕೊಳ್ಳುತ್ತಿರುವುದು ನಾಚಿಕೆಗೇಡು ಎಂದು ಜೆಡಿಎಸ್ ಆರೋಪಿಸಿದೆ.

- Advertisement - 

ಬೆಂಗಳೂರಿನಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿ ಮಾಡಲು ಅಧಿಕಾರಿಗಳು ಸಹ ಸಂಪೂರ್ಣ ವಿಫಲವಾಗಿರುವುದು ಸಿದ್ದರಾಮಯ್ಯ ಸರ್ಕಾರದ ಅದಕ್ಷತೆ ಹಿಡಿದ ಕನ್ನಡಿಯಾಗಿದೆ ಎಂದು ಜೆಡಿಎಸ್ ದೂರಿದೆ.

- Advertisement - 
Share This Article
error: Content is protected !!
";