ಆರ್.ಎನ್.ರಘು, ಚಿಕ್ಕಂದವಾಡಿ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಳಲ್ಕೆರೆ ತಾಲ್ಲೂಕು ಚಿಕ್ಕಂದವಾಡಿ ಗ್ರಾಮದಲ್ಲಿ ಇಡೀ ರಾತ್ರಿ ಸುರಿದ ಮಳೆಗೆ ಪ್ರಾಥಮಿಕ ಶಾಲೆಯು ನೀರಿನಿಂದ ಆವೃತವಾಗಿ ನೀರು ಹೊರಹೋಗಲು ಸ್ಥಳವಕಾಶವಿರುವುದಿಲ್ಲ ಮಳೆ ನೀರು ಶೇಖರಣಾ ತೊಟ್ಟಿಯಾಗಿ ನಿರ್ಮಾಣವಾಗಿದೆ. ಜೊತೆಗೆ ಈ ಶಾಲೆಯಲ್ಲಿ ಮಕ್ಕಳ ಆಟ, ಪಾಠ, ಊಟ ಹಾಗೂ ಓದಿಗೆ ತೊಂದರೆಗಳು ಎದುರಾಗಿವೆ.
ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಕೆ.ಬಿ. ರಂಗಸ್ವಾಮಿ ಮಾತನಾಡಿ ಇಡೀ ರಾತ್ರಿ ಸುರಿದ ಮಳೆಗೆ ಶಾಲೆಯ ಆವರಣ ನೀರಿನಿಂದ ಆವೃತವಾಗಿ, ಮಕ್ಕಳಿಗೆ ಅಡುಗೆ ತಯಾರಿಸುವ ಕೋಣೆಗೆ ನೀರು ಬಂದಿದ್ದು ಆತಂಕ ವ್ಯಕ್ತಪಡಿಸಿದೆ. ಈ ಶಾಲೆಯ ಆವರಣಕ್ಕೆ ಬಂದ ನೀರು ಹೊರಹೋಗಲು ಯಾವುದೇ ನಿಗದಿತ ಸೌಲಭ್ಯವಿಲ್ಲ, ಈ ಹಿನ್ನಲೆಯಲ್ಲಿ ಗ್ರಾಮ ಪಂಚಾಯತ್ ಹಾಗೂ ಗ್ರಾಮದ ಸದಸ್ಯರ ಸಹಾಯದೊಂದಿಗೆ ನೀರನ್ನು ಹೊರ ಹಾಕುವ ವ್ಯವಸ್ಥೆಗೆ ಮನವಿ ಮಾಡಲಾಗಿದೆ.
ಶಾಲೆಗೆ ಹಿಂದಿನ ಸಾಲಿನ ಅನುದಾನದಡಿಯಲ್ಲಿ ಸಿದ್ಧಗೊಂಡ ನಾಲ್ಕು ಹೊಸ ಕಟ್ಟಡಗಳನ್ನು ಬಳಸಲಾಗುತ್ತಿದೆ, ಜೊತೆಗೆ ಮಕ್ಕಳಿಗೆ ನೂತನ ಶೌಚಾಲಯ ಹಾಗೂ ಅಡುಗೆ ಕೋಣೆ ಕಟ್ಟಡಗಳು ಪ್ರಗತಿಯಲ್ಲಿದೆ, ಈ ಕಾಮಗಾರಿ ಬೇಗನೆ ಆಗುವುದರಿಂದ ಇನ್ನಷ್ಟು ಸಮಸ್ಯೆಗಳು ಕಡಿಮೆಯಾಗುವ ಜೊತೆಗೆ ಈ ಶಾಲೆಗೆ ಇನ್ನು 2-3 ಕೊಠಡಿಗಳ ಅವಶ್ಯವಿದ್ದು. ಈ ಶಾಲೆಯ ಮೂಲ ಸಮಸ್ಯೆ ಚರಂಡಿ ನೀರು ಹೊರ ಹೋಗಲು ಜಾಗದ ಕೊರತೆ ಎದ್ದು ಕಾಣುತ್ತಿದೆ.
ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎಚ್.ಆರ್. ಪ್ರದೀಪ್ ಮಾತನಾಡಿ ಪ್ರಾಥಮಿಕ ಶಾಲೆಯು ತಗ್ಗು ಪ್ರದೇಶದಲ್ಲಿದ್ದು ಈ ಆವರಣದಲ್ಲಿ ಈಗಾಗಲೇ ಹಲವು ಸಮಸ್ಯೆಗಳನ್ನು ಬಗೆಹರಿಸಿದ್ದು, ಮಳೆ ನೀರು ಹೊರ ಹೋಗಲು, ಸೂಕ್ತ ಕ್ರಮ ಕೈಗೊಳ್ಳುವುದರ ಜೊತೆಗೆ, ಅಲ್ಲಿರುವ ಸಣ್ಣ ಪುಟ್ಟ ಕೆಲಸಗಳನ್ನು ಸಹ ಸಂಪೂರ್ಣವಾಗಿ ಬಗೆಹರಿಸಲಾಗುವುದು.
ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷ ಎನ್. ಮೂರ್ತಿ ಮಾತನಾಡಿ ನೂತನವಾಗಿ ನಿರ್ಮಾಣವಾಗುತ್ತಿರುವ ಅಡುಗೆ ಕೋಣೆ ಹಾಗೂ ಶೌಚಾಲಯಗಳ ಕಟ್ಟಡಗಳ ಕೆಲಸ ಅರ್ಧಕ್ಕೆ ನಿಂತಿವೆ, ಸಮಯಕ್ಕೆ ಸರಿಯಾಗಿ ಅನುದಾನದಡಿ ಬಿಲ್ಲುಗಳು ಆಗದೆ ಇರುವ ಕಾರಣ ಕಾಮಗಾರಿ ಪ್ರಗತಿ ಕುಂಠಿತವಾಗಿದ್ದು, ಈ ಹಿನ್ನೆಲೆಯಲ್ಲಿ ಕಟ್ಟಡ ಕಾಮಗಾರಿಗಳು ಪೂರ್ಣಗೊಂಡು, ಅಡುಗೆ ಕೋಣೆ ಹಾಗೂ ಶೌಚಾಲಯಗಳು ಮಕ್ಕಳ ಬಳಕೆಗೆ ಬೇಗನೆ ಸಿಗುವಂತಾಗಲಿ.

