ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಪ್ರಜಾ ವಿಮೋಚನಾ ಬಹುಜನ ಸಮಿತಿ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ನೂತನವಾಗಿ ಅಲ್ಪ ಸಂಖ್ಯಾತರ ಘಟಕಕ್ಕೆ ಪದಾಧಿಕಾರಿಗಳ ಅಯ್ಕೆ ಹಾಗು ಅಲ್ಪ ಸಂಖ್ಯಾತರ ಘಟಕದ ನಾಮಫಲಕ ಅನಾವರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ದರ್ಗಾ ಪೇಟೆಯಲ್ಲಿ ಅಯೋಜನೆ ಮಾಡಲಾದ ಕಾರ್ಯಕ್ರಮದಲ್ಲಿ ಪ್ರಜಾ ವಿಮೋಚನಾ ಬಹುಜನ ಸಮಿತಿ ರಾಜ್ಯಾಧ್ಯಕ್ಷ ಬಿಜ್ಜವಾರ ನಾಗರಾಜ ಮಾತನಾಡಿ ರಾಜ್ಯದಲ್ಲಿ ಅಲ್ಪಸಂಖ್ಯಾತರು ಸಮಾಜದಲ್ಲಿ ಅರ್ಥಿಕ ಸಾಮಾಜಿಕ ಸಾಂಸ್ಕೃತಿಕ ಹಾಗು ರಾಜಕೀಯವಾಗಿ ಜೀವನದಲ್ಲಿ ಪ್ರತಿಯೊಬ್ಬರಿಗೂ ಭಾಗವಹಿಸಲು ಸಾಮಾನ ಅವಕಾಶಗಳು ಇದೆ ಅದರೆ ಅದ್ದಕ್ಕೆ ನಾವು ಬದ್ಧರಾಗಿರಬೇಕು ರಾಷ್ಟ್ರೀಯ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವುದನ್ನು ನಾವುಗಳು ಒಟ್ಟಾಗಿದ್ದರೆ ನಮ್ಮ ಹಕ್ಕುಗಳನ್ನು ಪಡೆಯಬಹುದು ಎಂದರು
ಈ ಸಂದರ್ಭದಲ್ಲಿ ಪ್ರಜಾ ವಿಮೋಚನಾ ಬಹುಜನ ಸಮಿತಿಯ ರಾಜ್ಯ ಪ್ರದಾನ ಕಾರ್ಯದರ್ಶಿ ಚನ್ನಿಗರಾಯಪ್ಪ ಮುನಿಕೃಷ್ಣಯ್ಯ ರಾಜ್ಯ ಗೌರವಾಧ್ಯಕ್ಷ ಮಂಜುಳ ಬೆಂ ವಿಭಾಗಿಯ ಅಧ್ಯಕ್ಷರು ಲಕ್ಷ್ಮೀ ಶ್ರೀನಿವಾಸ ಬೆಂ ಗ್ರಾ ಜಿಲ್ಲಾಧ್ಯಕ್ಷರು.
ಅನುಪಮ ಅಧ್ಯಕ್ಷೆ ದೇವನಹಳ್ಳಿ ತಾ| ಮೊಕ್ಕದರ್ ರಾಜ್ಯ ಕಾರ್ಯದರ್ಶಿ ಅರ್ಬಸ್ ಖಾನ್ ಸಯ್ಯದ್ ಅಬ್ಬು ಮಹಮ್ಮದ್ ಪೈಜುಲಾ ಇರ್ಪಾನ್ ಪಾಷ್ ಮುಬಾಕರ್ ತಾಲ್ಲೂಕು ಪದಾಧಿಕಾರಿಗಳು ಶ್ರೀನಿವಾಸ್ ಮುನಿಕೃಷ್ಣ ಜಗದೀಶ್ ಮಣಿ ಕೆ ಮುನಿರಾಜ್ ಮುಂತಾದವರು ಹಾಜರಿದ್ದರು.