ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲಾ 17 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಜಿಲ್ಲೆಯ ಹಿರಿಯ ಸಾಹಿತಿ, ಲೇಖಕ ಪ್ರೊ. ಜಿ. ಪರಮೇಶ್ವರಪ್ಪ ಅವರನ್ನು ಜಿಲ್ಲೆಯ ಹಿರಿಯ ಸಾಹಿತಿ ಪ್ರೊ. ಎಚ್. ಲಿಂಗಪ್ಪ ಹಾಗೂ ಗಂಗಾಂಬ ಅವರು ಪ್ರೀತಿಯಿಂದ ಸನ್ಮಾನಿಸಿದರು.
ಜಿಲ್ಲೆಯ ಸಾಹಿತ್ಯಕ್ಕೆ ಪ್ರೊ. ಜಿ. ಪರಮೇಶ್ವರಪ್ಪ ಅವರ ಕೊಡುಗೆ ಮಹತ್ವದ್ದು ಎಂದು ಶ್ಲಾಘಿಸಿದರು. ಈ ವೇಳೆ ಇತಿಹಾಸ ಸಂಶೋಧಕ ಡಾ. ಎನ್. ಎಸ್. ಮಹಂತೇಶ ದಂಪತಿ ಉಪಸ್ಥಿತರಿದ್ದರು.