ಸರ್ವರ್‌ ಸಮಸ್ಯೆ ಆಡಳಿತ ಯಂತ್ರ ಕುಸಿತ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್‌ಸರ್ಕಾರದಲ್ಲಿ ಸಂಪೂರ್ಣ ಆಡಳಿತ ಯಂತ್ರವೇ ಕುಸಿದು ಬಿದ್ದಿದೆ ಎಂದು ಜೆಡಿಎಸ್ ಆರೋಪಿಸಿದೆ.

ಕಾವೇರಿ-2 ತಂತ್ರಾಂಶ ಸರ್ವರ್‌ಸಮಸ್ಯೆಯಿಂದ ರಾಜ್ಯದೆಲ್ಲೆಡೆ ಆಸ್ತಿ ನೋಂದಣೆ, ಆಸ್ತಿ ಪತ್ರ ಕ್ರಯ, ವಿಭಜನೆ, ಒಪ್ಪಂದ ಪ್ರಕ್ರಿಯೆಗಳಿಗಾಗಿ ಉಪ ನೋಂದಣಾಧಿಕಾರಿಗಳ ಕಚೇರಿಗಳಿಗೆ ಸಾರ್ವಜನಿಕರು, ಇಡೀ ಕುಟುಂಬದವರು ದಿನವೀಡಿ ಕಾಯುವ ಶಿಕ್ಷೆಯನ್ನು ನೀಡಿದೆ ಎಂದು ಜೆಡಿಎಸ್ ಕಿಡಿಕಾರಿದೆ.

- Advertisement - 

ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಯಾವುದೊಂದು ಸರಿ ಇಲ್ಲ. ಪಡಿತರ ವಿತರಣೆಯಲ್ಲೂ ಸಮಸ್ಯೆ, ಉಪ ನೋಂದಣಾಧಿಕಾರಿ ಕಚೇರಿ ಸೇರಿದಂತೆ ಬಹುತೇಕ ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ಸರ್ವರ್‌ಡೌನ್‌ಸಮಸ್ಯೆ ಮಾಮೂಲಿಯಾಗಿದ್ದು ಜನರು ಸಿದ್ದರಾಮಯ್ಯ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ ಎಂದು ಜೆಡಿಎಸ್ ಟೀಕಿಸಿದೆ.

 

- Advertisement - 

 

Share This Article
error: Content is protected !!
";