ಇ.ಡಿ ಮೂಲಕ ನನ್ನ ಕುಟುಂಬಕ್ಕೆ ಕಿರುಕುಳ-ಸಿದ್ದರಾಮಯ್ಯ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಡಾ ನಿವೇಶನ ಹಂಚಿಕೆ ವಿಷಯದಲ್ಲಿ ಅಧಿಕಾರದಲ್ಲಿದ್ದಾಗ ತಾವೇ ನಿವೇಶನ ಹಂಚಿದ್ದ ಬಿಜೆಪಿ ಪಕ್ಷ ನಂತರ ಹಗರಣ ನಡೆದಿದೆ ಎಂದು ಬಿಂಬಿಸಿ, ನನ್ನ ವಿರುದ್ಧ ಕುತಂತ್ರದ ಹೋರಾಟ ನಡೆಸಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ರಾಜ್ಯ ಬಿಜೆಪಿ ನಾಯಕರ ಈ‌ ಕುತಂತ್ರದ ಜೊತೆ ಷಾಮೀಲಾದ ಕೇಂದ್ರ ಸರ್ಕಾರ ಇ.ಡಿ ತನಿಖಾ ಸಂಸ್ಥೆಯ ಮೂಲಕ ನನ್ನ ಕುಟುಂಬಕ್ಕೆ ಕಿರುಕುಳ ನೀಡುವ ಪ್ರಯತ್ನ ನಡೆಸಿತು. ನ್ಯಾಯಾಲಯದ ತೀರ್ಪಿನಿಂದಾಗಿ ನನ್ನ ಕುಟುಂಬದ ವಿರುದ್ಧದ ಎಲ್ಲಾ ರಾಜಕೀಯ ಕುತಂತ್ರಗಳು ನಿಷ್ಪಲಗೊಂಡು ಸತ್ಯ ಗೆದ್ದಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

- Advertisement - 

ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ದೂರು ದಾಖಲಾದ ದಿನದಿಂದ ಹಿಡಿದು ಇಲ್ಲಿಯ ವರೆಗೆ ಕಾನೂನಿನ ಹೋರಾಟವನ್ನು ನನ್ನ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ನಿಭಾಯಿಸಿದರು ಎಂದು ಸಿಎಂ ತಿಳಿಸಿದರು.

 

- Advertisement - 

 

 

 

Share This Article
error: Content is protected !!
";