ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಸಾಲಮಾಡಿ ಜನರ ಮೂಗಿಗೆ ತುಪ್ಪ ಸವರಿದ ಸಿದ್ದರಾಮಯ್ಯ” ಎಂದು ಜೆಡಿಎಸ್ ಆರೋಪಿಸಿದೆ.
₹4.09 ಲಕ್ಷ ಕೋಟಿ ಬಜೆಟ್ ಮಂಡಿಸಿ, ಅದರಲ್ಲಿ ₹1.16 ಲಕ್ಷ ಕೋಟಿ ಹೊಸದಾಗಿ ಸಾಲ ಬೇಡುತ್ತಿದ್ದಾರೆ “ಸಾಲರಾಮಯ್ಯ” ಎಂದು ಜೆಡಿಎಸ್ ಆರೋಪಿಸಿದೆ.
2025-26ರ ಅಂತ್ಯಕ್ಕೆ ಕರ್ನಾಟಕ ರಾಜ್ಯದ ಒಟ್ಟು ಸಾಲ ₹7,64,655 ಕೋಟಿ ರೂಪಾಯಿಗಳು. ಸರ್ಕಾರದ ಖರ್ಚು, ಸರ್ಕಾರಿ ನೌಕರರ ಸಂಬಳ, ಪಿಂಚಣಿಗೆ ಸರ್ಕಾರದ ಬಳಿ ಆದಾಯವಿಲ್ಲದೇ, ಖರ್ಚು ನಿಬಾಯಿಸಲು ₹19,262 ಕೋಟಿ ಸಾಲ ಪಡೆಯಲಾಗುತ್ತಿದೆ.
ಬಜೆಟ್ನ ಅಂದಾಜು 30% ಹಣ “ಸಾಲ ಮಾಡಿ ರಾಜ್ಯದ ಜನರ ಮೂಗಿಗೆ ತುಪ್ಪ ಸವರಲು” ಹೊರಟಿದೆ ಸಿದ್ದರಾಮಯ್ಯರ ದಿವಾಳಿ ಕಾಂಗ್ರೆಸ್ಸರ್ಕಾರ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.