ಸಾಮಾಜಿಕ ಭದ್ರತಾ ಫಲಾನುಭವಿಗಳು ಮ್ಯಾಪಿಂಗ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಿವಿಧ ಸಾಮಾಜಿಕ ಭದ್ರತೆ ಯೋಜನೆಗಳಡಿ ಮಾಸಾಶನ ಪಡೆಯುತ್ತಿರುವ ಫಲಾನುಭವಿಗಳ ಅಂಚೆ, ಬ್ಯಾಂಕ್ ಖಾತೆಗೆ ಆಧಾರ್ ಮತ್ತು ಎನ್‌ಪಿಸಿಐ ಮ್ಯಾಪಿಂಗ್ ಮಾಡುವಂತೆ ಸೂಚಿಸಿದೆ.

- Advertisement - 

ವಿವಿಧ ಸಾಮಾಜಿಕ ಭದ್ರತೆ ಯೋಜನೆಗಳಡಿ ಹಾಲಿ ಮಾಸಾಶನ ಪಡೆಯುತ್ತಿರುವ ಫಲಾನುಭವಿಗಳಿಗೆ ಮಾಸಾಶನ ಮೊತ್ತವನ್ನು ಪ್ರತಿ ಮಾಹೆ ವಿಳಂಬವಾಗದತೆ ಸಕಾಲದಲ್ಲಿ ಫಲಾನುಭವಿಗಳಿಗೆ ಅನುಕೂಲಕರವಾದ ಅಂಚೆ, ಬ್ಯಾಂಕ್ ಖಾತೆಗೆ 2023ರ ಡಿಸೆಂಬರ್ ಮಾಹೆಯಿಂದ ನೇರ ಹಣ ಸಂದಾಯ ಮೂಲಕ ಜಮಾ ಮಾಡಲಾಗುತ್ತಿದೆ.

- Advertisement - 

ಪ್ರಯುಕ್ತ ಈ ಯೋಜನೆಗಳಡಿ ಫಲಾನುಭವಿಗಳಿಗೆ ಮಾಸಾಶನ ಮೊತ್ತವನ್ನು ಡಿಸೆಂಬರ್ 2023ರ ಮಾಹೆಯಿಂದ ಆಧಾರ್ ಮತ್ತು ಎನ್‌ಪಿಸಿಐ ಮ್ಯಾಪಿಂಗ್ ಆದಂತಹ ಬ್ಯಾಂಕ್, ಅಂಚೆ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತಿದ್ದು, ಕಳೆದ 2-3 ತಿಂಗಳಿದ ಮಾಸಾಶನ ಪಡೆಯದಂತಹ ಫಲಾನುಭವಿಗಳು ನೇರವಾಗಿ ಇತ್ತೀಚಿನ ಆಧಾರ್ ಕಾರ್ಡ್ ಮತ್ತು ಎನ್‌ಪಿಸಿಐ ಮ್ಯಾಪಿಂಗ್ ಆದಂತಹ ಅಂಚೆ, ಬ್ಯಾಂಕ್ ಪುಸ್ತಕದೊಂದಿಗೆ ಸಂಬAಧಿಸಿದ ನಾಡಕಛೇರಿಯ ಉಪತಹಶೀಲ್ದಾರ್ ಅಥವಾ ತಹಶೀಲ್ದಾರ್‌ಗಳನ್ನು ತಪ್ಪದೆ ಸಂಪರ್ಕಿಸಿ, ಸರ್ಕಾರದ ಸೌಲಭ್ಯದ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

- Advertisement - 

Share This Article
error: Content is protected !!
";