ಏಪ್ರಿಲ್ 26ರಂದು ವಿಶೇಷ ಲೋಕ ಅದಾಲತ್-ನ್ಯಾ. ಕಾಮೇಶ್ವರ ರಾವ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ  ಏಪ್ರಿಲ್ 26 ರಂದು ವಿಶೇಷ ಲೋಕ ಅದಾಲತ್ ಹಾಗೂ ಎರಡನೇ ರಾಷ್ಟ್ರೀಯ ಲೋಕ ಅದಾಲತ್ ಅನ್ನು ಜುಲೈ 12 ರಂದು  ಹಮ್ಮಿಕೊಳ್ಳಲಾಗಿದ್ದು, ಇತ್ಯರ್ಥವಾಗದೆ ಬಾಕಿ ಉಳಿದಿರುವ ಪ್ರಕರಣಗಳ ಇತ್ಯರ್ಥಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ಉಚ್ಛನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ವಿ.ಕಾಮೇಶ್ವರರಾವ್ ತಿಳಿಸಿದರು.

ಇಂದು ಉಚ್ಛನ್ಯಾಯಾಲಯದ  ಅಡ್ವೊಕೇಟ್ ಜನರಲ್ ಕೊಠಡಿಯಲ್ಲಿ  ಈ ಕುರಿತು ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ  ನ್ಯಾಯಮೂರ್ತಿಗಳು, ಇತ್ಯರ್ಥವಾಗದೆ ಬಾಕಿ ಉಳಿದಿರುವ ಪ್ರಕರಣಗಳ ಬಗ್ಗೆ  ಎಲ್ಲಾ ಮಧ್ಯಸ್ಥಿಕೆದಾರರ ಮುಖ್ಯಸ್ಥರು, ಇಲಾಖೆಗಳ ಹಾಗೂ ನಿಗಮಗಳ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಡೆಪ್ಯುಟಿ ಸಾಲಿಸಿಟರ್ ಜನರಲ್ ಶಾಂತಿ ಭೂಷಣ್, ಆಡಳಿತಾಧಿಕಾರಿ ಶ್ರೀಮತಿ ರೂಪ, ಮಧ್ಯಸ್ಥಿಕೆದಾರರು, ಮುಖ್ಯಸ್ಥರು, ಇಲಾಖೆಗಳ ಹಾಗೂ ನಿಗಮಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
error: Content is protected !!
";