ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಬ್ಯಾಡರಹಳ್ಳಿಯ ಶ್ರೀರುಕ್ಮಿಣಿ ಪಾಂಡುರಂಗ ಕೃಪಾ ಘೋಷಿತ ನಾಟಕ ಮಂಡಳಿ ವತಿಯಿಂದ ಇದೇ ತಿಂಗಳು ಮಾರ್ಚ್-12 ರಂದು ಬುಧವಾರ ರಾತ್ರಿ 8.30 ಗಂಟೆಗೆ ಬ್ಯಾಡರಹಳ್ಳಿ ಗ್ರಾಮದಲ್ಲಿ ತುಮಕೂರಿನ ಶ್ರೀಮಂಜುನಾಥ್ ಡ್ರಾಮಾ ಸೀನ್ಸ್ ನ ಭವ್ಯ ರಂಗ ಸಜ್ಜಿಕೆಯಲ್ಲಿ ಶ್ರೀಕೃಷ್ಣ ಗಾರುಡಿ ಅರ್ಥಾತ್ ಭೀಮಾರ್ಜುನರ ಗರ್ವಭಂಗ ಎನ್ನುವ ಪೌರಾಣಿಕ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಶ್ರೀಕೃಷ್ಣನ ಪಾತ್ರದಲ್ಲಿ ಇಂದುಧರ ಎಂ.ಯಾದವ್, ನಾರದನ ಪಾತ್ರದಲ್ಲಿ ಹರಿಯಬ್ಬೆ ಗ್ರಾಮದ ಓ.ಚಂದ್ರಶೇಖರ್, ಧರ್ಮರಾಯನ ಪಾತ್ರದಲ್ಲಿ ಟಿ.ಗಿರಿಸ್ವಾಮಿ, ಭೀಮನ ಪಾತ್ರದಲ್ಲಿ ವಕೀಲ, ರಂಗಭೂಮಿ ಕಲಾವಿದ ಜಿ.ಪಾಂಡುರಂಗಪ್ಪ, ಅರ್ಜುನನಾಗಿ ಟಿ.ತಿಮ್ಮರಾಯ, ನಕುಲನಾಗಿ ಸುಬ್ಬರಾವ್, ಸಹದೇವನಾಗಿ ಮುರುಳಿ, ದೌಮ್ಯ ವೃಷ್ಠಿಯಾಗಿ ಈರೇಗೌಡ್ರು,
ಬಲರಾಮನಾಗಿ ಎಸ್.ಆರ್ ರಮೇಶ್, ಮಕರಂದನಾಗಿ ಬಿ.ಓ ಶಿವಕುಮಾರ್, ರಾಕ್ಷಸಿಯಾಗಿ ಆರ್.ಅಂಜನಪ್ಪ ಉಪ್ಪಾರಹಳ್ಳಿ, ಮಿತ್ರವಿಂದೆಯಾಗಿ ಮಮತ, ಸುಭದ್ರೆಯಾಗಿ ಹೇಮಾ, ಸತ್ಯಭಾಮೆ ಮತ್ತು ಮೋಹಿನಿಯಾಗಿ ಬೆಂಗಳೂರಿನ ಚೈತ್ರ, ದ್ರೌಪದಿ ಮತ್ತು ರುಕ್ಮಿಣಿಯಾಗಿ ತುಮಕೂರಿನ ತಾರಾ, ಜಾಂಬವತಿಯಾಗಿ ಬೆಂಗಳೂರಿನ ಜಯಲಕ್ಷ್ಮಿ ಇವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆಂದು ಸಂಘಟಕ ವಕೀಲರಾದ ಕೂಡ್ಲಹಳ್ಳಿ ಪಾಂಡುರಂಗಪ್ಪ ತಿಳಿಸಿದ್ದಾರೆ.