ರೈಲು ನಿಲ್ದಾಣಕ್ಕೆ ಶ್ರೀಸಿದ್ದೇಶ್ವರ ಸ್ವಾಮಿಗಳ ಹೆಸರು ಶಿಫಾರಸ್ಸು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚನ್ನಬಸವ ಪಟ್ಟದ ದೇವರ ಹೆಸರು ಕೋರಿ ಕೇಂದ್ರಕ್ಕೆ ಪತ್ರ ವಿಜಯಪುರ ರೈಲು ನಿಲ್ದಾಣಕ್ಕೆ
ಶ್ರೀ ಸಿದ್ದೇಶ್ವರ ರೈಲು ನಿಲ್ದಾಣಎಂದು ನಾಮಕರಣ ಮಾಡುವಂತೆ ನಮ್ಮ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ವತಿಯಿಂದ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

ಶ್ರೀ ಸಿದ್ದೇಶ್ವರ ಸ್ವಾಮಿಗಳ ಹೆಸರನ್ನು ಅಜರಾಮರಗೊಳಿಸಬೇಕೆಂಬ ಕೋಟ್ಯಾಂತರ ಭಕ್ತರ ಆಶಯಗಳು ಈಡೇರಲು, ಕೇಂದ್ರ ಸರ್ಕಾರ ಈ ಶಿಫಾರಸ್ಸಿಗೆ ಶೀಘ್ರ ಅನುಮೋದನೆ ನೀಡಲಿ ಎಂಬುದೇ ನಮ್ಮೆಲ್ಲರ ಅಪೇಕ್ಷೆಯಾಗಿದೆ.

- Advertisement - 

ಇದೇ ರೀತಿ, ಪ್ರಾದೇಶಿಕ ಐತಿಹ್ಯ ಮತ್ತು ಸಂಸ್ಕೃತಿಗೆ ಅನುಗುಣವಾಗಿ ಇತರ ರೈಲು ನಿಲ್ದಾಣಗಳ ಹೆಸರನ್ನು ಬದಲಾಯಿಸಲು ಈ ಕೆಳಗಿನ ಶಿಫಾರಸ್ಸುಗಳನ್ನು ಸಹ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಬೀದರ್ ನಿಲ್ದಾಣಕ್ಕೆ – ಚನ್ನಬಸವ ಪಟ್ಟದ ದೇವರ ರೈಲು ನಿಲ್ದಾಣ
ಬೆಳಗಾವಿ ನಿಲ್ದಾಣಕ್ಕೆ – ಶಿವಬಸವ ಮಹಾಸ್ವಾಮಿಜಿ ರೈಲು ನಿಲ್ದಾಣ
ಸುರಗೊಂಡನ ಕೊಪ್ಪ ನಿಲ್ದಾಣಕ್ಕೆ-ಭಯಾಗಡ ರೈಲು ನಿಲ್ದಾಣಯ

- Advertisement - 

ಈ ನಾಮಕರಣಗಳು ನಮ್ಮ ರಾಜ್ಯದ ಆಧ್ಯಾತ್ಮಿಕ ಪರಂಪರೆ, ಸಾಂಸ್ಕೃತಿಕ ಗೌರವ ಮತ್ತು ಪ್ರಾದೇಶಿಕ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಎಂ.ಬಿ ಪಾಟೀಲ್ ಹೇಳಿದರು.

 

 

 

Share This Article
error: Content is protected !!
";