ಸ್ಟಾರ್ಟ್ ಅಪ್ ಯಾತ್ರಾ -ಸ್ಟಾರ್ಟ್ ಅಪ್ ಮಹಾಕುಂಭ್ ಎಸ್ ಜೆಎಂಐಟಿ ವಿದ್ಯಾರ್ಥಿಗಳ ಆಯ್ಕೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಎಸ್.ಜೆ.ಎಂ.ಐ.ಟಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ೪ನೇ ಸೆಮಿಸ್ಟರ್ ವಿದ್ಯಾರ್ಥಿಗಳಾದ ನಿತ್ಯಾ ಎಸ್
, ರಮ್ಯಶ್ರೀ ಎಸ್ ಎಸ್, ಹೇಮ ಎಸ್, ಸಹನ ಜಿ ಎಸ್, ರಕ್ಷಿತಾ ಎಂ ಹೆಚ್ ಇವರುಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇವರು ನವದೆಹಲಿಯಲ್ಲಿ ಆಯೋಜಿಸಿರುವ ಸ್ಟಾರ್ಟ್ ಅಪ್ ಯಾತ್ರಾ -ಸ್ಟಾರ್ಟ್ ಅಪ್ ಮಹಾಕುಂಭ್ ಕಾರ್ಯಕ್ರಮಕ್ಕೆ ಎಸ್.ಜೆ.ಎಂ.ಐ.ಟಿ ಕಾಲೇಜನ್ನು ಪ್ರತಿನಿಧಿಸಲಿದ್ದು, ಎಸ್.ಜೆ.ಎಂ.ಐ.ಟಿ ಈ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಾಯೋಜಕತ್ವ ನೀಡಿದೆ.

ಸ್ಟಾರ್ಟ್ ಅಪ್ ಯಾತ್ರಾ ಏಪ್ರಿಲ್ ೧-೮ನೇ ತಾರೀಖಿನವರೆಗೆ ನಡೆಯಲಿದ್ದು, ಸ್ಟಾರ್ಟ್ ಅಪ್ ಮಹಾಕುಂಭ್ ಎಫ್‌ಐಸಿಸಿಐ, ಅಸೋಚಮ್, ನಾಸ್ಕಾಂ ಹಾಗೂ ಸ್ಟಾರ್ಟ್ ಅಪ್ ಇಂಡಿಯಾ ಇವರ ಸಹಯೋಗದಲ್ಲಿ ದೆಹಲಿಯ ಭಾರತ್ ಮಂಡಪಂನಲ್ಲಿ ನಡೆಯಲಿದ್ದು, ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಆವಿಷ್ಕಾರಗಳನ್ನು ಪ್ರಸ್ತುತ ಪಡಿಸಲಿದ್ದಾರೆ.

- Advertisement - 

೨೦೦ಕ್ಕೂ ಹೆಚ್ಚು ಹೂಡಿಕೆದಾರರು ಭಾಗವಹಿಸಲಿದ್ದು, ವಿದ್ಯಾರ್ಥಿಗಳ ಉತ್ತಮ ಆವಿಷ್ಕಾರಗಳಿಗೆ ಈ ಹೂಡಿಕೆದಾರರು ಪ್ರೋತ್ಸಾಹ ನೀಡಲಿದ್ದಾರೆ.

ವಿದ್ಯಾರ್ಥಿಗಳಿಗೆ ಆಡಳಿತಮಂಡಳಿವರು, ಕಾಲೇಜಿನ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.

- Advertisement - 

 

Share This Article
error: Content is protected !!
";