ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಎಂಎಲ್ಎ ಮಾರ್ಷಲ್ ಆರ್ಟ್ ಮತ್ತು ಪಿಟ್ನ್ ಸ್ ಅಕಾಡೆಮಿ ವತಿಯಿಂದ ಗಣರಾಜ್ಯೋತ್ಸವ ಕಪ್ ನ್ನು ಬೆನಗಳೂರಿನ ಯಲಹಂಕದ ಶೇಷಾದ್ರಿಪುರಂ ಕಾಲೇಜ್ ನಲ್ಲಿ ಆಯೋಜಿಸಲಾಗಿದ್ದ
ರಾಜ್ಯ ಮಟ್ಟದ 7 ನೇ ವರ್ಷ ವಯೋಮಿತಿಯ ಕರಾಟೆ ಪಂದ್ಯಾವಳಿಯಲ್ಲಿ ಹಿರಿಯೂರಿನ ಫೈಟರ್ ಮಾರ್ಷಲ್ ಅಕಾಡೆಮಿ ಸೆಕೆಂಡ್ ಸ್ಟ್ಯಾಂಡರ್ಡ್ ವಿದ್ಯಾರ್ಥಿ ಧನುಷ್ ಮೋದಿ ತಂದೆ ಎಸ್ ಚೇತನ್ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಬಾಲಕ ಧನುಷ್ ಮೋದಿ ಸಾಧನೆಗೆ ತರೆಬೇತಿದಾರ ಎನ್. ಪ್ರಭು ಜೆ.ಪುಷ್ಪ ಮತ್ತು ಇಂದಿರಾಗಾಂಧಿ ಅಭಿಮಾನಿಗಳ ವೇದಿಕೆಯ ಸಂಸ್ಥಾಪ ಅಧ್ಯಕ್ಷ ಮಾಯಸಂದ್ರ ರಂಗಪ್ಪ ಯಾದವ್ ಅಭಿನಂದಿಸಿದ್ದಾರೆ.
ಮತ್ತು ವಿದ್ಯಾರ್ಥಿಯ ಈ ಸಾಧನೆಗೆ ಸಹಕರಿಸಿದ ಪೋಷಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

