ಪ್ರತಿಭಾ ಕಾರಂಜಿ: ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕುವೆಂಪು ಶಾಲೆಯ ವಿದ್ಯಾರ್ಥಿಗಳು

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಇತ್ತೀಚಿಗೆ ನಡೆದ ತಾಲ್ಲೂಕು ಮಟ್ಟದ ಪ್ರತಿಭಾಕಾರಂಜಿ ಕಾರ್ಯಕ್ರಮದಲ್ಲಿ ನಗರದ ಕುವೆಂಪು ಶಾಲೆಯ ವಿದ್ಯಾರ್ಥಿಗಳು ೯ ಬಹುಮಾನವನ್ನು ಪಡೆದಿದ್ದಾರೆಂದು ಆಡಳಿತಾಧಿಕಾರಿ ಎನ್.ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಅವರು ಈ ಬಗ್ಗೆ ಮಾಹಿತಿ ನೀಡಿ, ಪ್ರಬಂಧ ಸ್ಪರ್ಧೆಯಲ್ಲಿ ಪಿ.ಇಂದು ಪ್ರಥಮ, ಚಿತ್ರಕಲೆಯಲ್ಲಿ ಕೆ.ಎಂ.ಸಂಕಲ್ಪ ಪ್ರಥಮ, ಜಾನಪದ ಮತ್ತು ಭಾವಗೀತೆ ಸ್ಪರ್ಧೆ ಮೋಹಕವಿಸ್ಮಯಸಾಯಿ ಪ್ರಥಮ, ಅಭಿನಯ ಗೀತೆಯಲ್ಲಿ ರಂಜುಶ್ರೀ ಪ್ರಥಮ, ಚರ್ಚಾಸ್ಪರ್ಧೆಯಲ್ಲಿ ಧನಂಜಯ ದ್ವಿತೀಯ,

- Advertisement - 

ಇಂಗ್ಲೀಷ್ ಕಂಠಪಾಠಸ್ಪರ್ಧೆ ಎಂ.ಮಹಾಲಕ್ಷ್ಮಿ ದ್ವಿತೀಯ, ಕವನವಾಚನ ಸ್ಪರ್ಧೆಯಲ್ಲಿ ಟಿ.ಮಂಜುನಾಥ ದ್ವಿತೀಯ, ಭರತನಾಟ್ಯದಲ್ಲಿ ಜೆ.ಎಚ್.ಮಾನಸ ದ್ವಿತೀಯ ಸ್ಥಾನ ಪಡೆದ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 

 

- Advertisement - 

 

Share This Article
error: Content is protected !!
";