ನಟ ಪ್ರಥಮ್ ವಿರುದ್ಧ ಗುಡುಗಿದ ಆರೋಪಿ ಯಶಸ್ವಿನಿ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ):
 ಪ್ರಥಮ್​ಗೆ ಜೀವ ಬೆದರಿಕೆ ಹಾಕಿದ ಪ್ರಕರಣದ ಆರೋಪಿಗಳಾದ ಯಶಸ್ವಿನಿ ಮತ್ತು ಬೇಕರಿ ರಘು ಅವರು ಜಾಮೀನು ಪಡೆಯಲು ವಕೀಲರ ಮೂಲಕ ದೊಡ್ಡಬಳ್ಳಾಪುರದ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಹಾಜರಾದರು.

ಮಾಧ್ಯಮದವರೊಂದಿಗೆ ಈ ವೇಳೆ ಮಾತನಾಡಿದ ಯಶಸ್ವಿನಿ, ನಟ ಪ್ರಥಮ್ ಮೇಲೆ ಪ್ರತಿದೂರು ದಾಖಲಿಸಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಎಚ್ಚರಿಸಿದರು.

- Advertisement - 

ಎಲ್ಲಮ್ಮ ದೇವಸ್ಥಾನಕ್ಕೆ ಆಗಮಿಸಿದ್ದಾಗ ನನ್ನನ್ನು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನಟ ಪ್ರಥಮ್ ನಮ್ಮ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ನನ್ನಿಂದ ದರ್ಶನ್ ಅವರಿಗೆ ಏನಾಗಬೇಕು? ಅವರಿಂದ ನನಗೇನಾಗಬೇಕು? ಸುಮ್ಮನೆ ದರ್ಶನ್ ಹೆಸರು ತಂದಿದ್ದಾರಷ್ಟೇ. ಪ್ರಥಮ್​ನನ್ನು ಬಿಡೋ ಮಾತೇ ಇಲ್ಲ, ನಾನಂತೂ ಬಿಡುವ ಮಗಳೇ ಅಲ್ಲ ಎಂದು ಆರೋಪಿ ಯಶಸ್ವಿನಿ ಗುಡುಗಿದರು.

ದರ್ಶನ್ ಅಭಿಮಾನಿಗಳೆಂದು ಹೇಳಿಕೊಂಡಿರುವ ಯಶಸ್ವಿನಿ ಮತ್ತು ಬೇಕರಿ ರಘು ಮೇಲೆ ಭಾರತೀಯ ನ್ಯಾಯ ಸಂಹಿತೆಯಡಿ 351(2)(3), 352,126(2) 3(5) ಪ್ರಕರಣ ದಾಖಲಿಸಿದ್ದರು.

- Advertisement - 

ಆರೋಪಿಗಳು ಕೋರ್ಟ್​ಗೆ ಶರಣಾಗುವ ಮಾಹಿತಿ ತಿಳಿದ ಪೊಲೀಸರು, ಬಂಧಿಸುವ ಯತ್ನ ನಡೆಸಿದರು. ಆದರೆ, ಅವರು ಪೊಲೀಸರ ಕಣ್ಣು ತಪ್ಪಿಸಿ ಕೋರ್ಟ್‌ ಒಳಗೆ ಹೋದರು. ಆರೋಪಿಗಳು ಜಾಮೀನಿಗೆ ಅರ್ಜಿ ಹಾಕಿದ್ದು, ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆ ಇದೆ.

Share This Article
error: Content is protected !!
";