7 ಮಂದಿ ಐಪಿಎಸ್ ಅಧಿಕಾರಿಗಳ ದಿಢೀರ್​ ವರ್ಗಾವಣೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪೊಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಮೇಜರ್​ ಸರ್ಜರಿ ಮಾಡಿದ್ದು
, ಏಳು ಐಪಿಎಸ್ ಅಧಿಕಾರಿಗಳನ್ನು ದಿಢೀರ್​ ವರ್ಗಾವಣೆ ಮಾಡಿ ಶುಕ್ರವಾರ ಆದೇಶ ಹೊರಡಿಸಿದೆ.

- Advertisement - 

ಹುದ್ದೆ ನಿರೀಕ್ಷೆಯಲ್ಲಿದ್ದ ಶಾಂತನು ಸಿನ್ಹಾ ಅವರನ್ನು ಸಿಐಡಿಯ ಡಿಐಜಿ ಹುದ್ದೆಗೆ ಹಾಗೂ ಸಿಐಡಿಯ ಎಸ್​​ಪಿ ಹುದ್ದೆಗೆ ಜಿ.ಸಂಗೀತ ಅವರನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ.

- Advertisement - 

ಹಿರಿಯ ಪೊಲೀಸ್ ಅಧಿಕಾರಿಗಳಾದ ಶಾಂತನು ಸಿನ್ಹಾ- ಡಿಐಜಿಪಿ, ಸಿಐಡಿ ವಿಭಾಗಕ್ಕೆ ವರ್ಗಾವಣೆಗೊಂಡಿದ್ದಾರೆ. ಅದೇ ರೀತಿ ಜಿ.ಸಂಗೀತಾ, ಎಸ್ ಪಿ, ಸಿಐಡಿ ವಿಭಾಗ, ಅಬ್ದುಲ್ ಅಹದ್, ನಿರ್ದೇಶಕರು,

ಬಿಎಂಟಿಸಿ(ಸೆಕ್ಯೂರಿಟಿ & ವಿಜಿನಲ್ಸ್), ಲಕ್ಷ್ಮಣ್ ನಿಂಬರಗಿ, ಎಸ್ ಪಿ, ವಿಜಯಪುರ ಜಿಲ್ಲೆ, ಚನ್ನಬಸವಣ್ಣ ಲಂಗೋಟಿ, ನಿರ್ದೇಶಕ ಕರ್ನಾಟಕ ಪೊಲೀಸ್ ಅಕಾಡೆಮಿ (ಹೆಚ್ಚುವರಿ ಹೊಣೆ), ಪೃಥ್ವಿಕ್ ಶಂಕರ್, ಎಸ್ ಪಿ, ಯಾದಗಿರಿ ಜಿಲ್ಲೆ, ಶಿವಾಂಶು ರಾಜಪೂತ್, ಎಸ್ ಪಿ, ರಾಜ್ಯ ಅಪರಾಧ ದಾಖಲೆ ವಿಭಾಗಕ್ಕೆ ವರ್ಗಾವಣೆಯಾದ ಅಧಿಕಾರಿಗಳಾಗಿದ್ದಾರೆ.

- Advertisement - 

 

Share This Article
error: Content is protected !!
";