7 ಮಂದಿ ಐಪಿಎಸ್ ಅಧಿಕಾರಿಗಳ ದಿಢೀರ್​ ವರ್ಗಾವಣೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪೊಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಮೇಜರ್​ ಸರ್ಜರಿ ಮಾಡಿದ್ದು
, ಏಳು ಐಪಿಎಸ್ ಅಧಿಕಾರಿಗಳನ್ನು ದಿಢೀರ್​ ವರ್ಗಾವಣೆ ಮಾಡಿ ಶುಕ್ರವಾರ ಆದೇಶ ಹೊರಡಿಸಿದೆ.

ಹುದ್ದೆ ನಿರೀಕ್ಷೆಯಲ್ಲಿದ್ದ ಶಾಂತನು ಸಿನ್ಹಾ ಅವರನ್ನು ಸಿಐಡಿಯ ಡಿಐಜಿ ಹುದ್ದೆಗೆ ಹಾಗೂ ಸಿಐಡಿಯ ಎಸ್​​ಪಿ ಹುದ್ದೆಗೆ ಜಿ.ಸಂಗೀತ ಅವರನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಗಳಾದ ಶಾಂತನು ಸಿನ್ಹಾ- ಡಿಐಜಿಪಿ, ಸಿಐಡಿ ವಿಭಾಗಕ್ಕೆ ವರ್ಗಾವಣೆಗೊಂಡಿದ್ದಾರೆ. ಅದೇ ರೀತಿ ಜಿ.ಸಂಗೀತಾ, ಎಸ್ ಪಿ, ಸಿಐಡಿ ವಿಭಾಗ, ಅಬ್ದುಲ್ ಅಹದ್, ನಿರ್ದೇಶಕರು,

ಬಿಎಂಟಿಸಿ(ಸೆಕ್ಯೂರಿಟಿ & ವಿಜಿನಲ್ಸ್), ಲಕ್ಷ್ಮಣ್ ನಿಂಬರಗಿ, ಎಸ್ ಪಿ, ವಿಜಯಪುರ ಜಿಲ್ಲೆ, ಚನ್ನಬಸವಣ್ಣ ಲಂಗೋಟಿ, ನಿರ್ದೇಶಕ ಕರ್ನಾಟಕ ಪೊಲೀಸ್ ಅಕಾಡೆಮಿ (ಹೆಚ್ಚುವರಿ ಹೊಣೆ), ಪೃಥ್ವಿಕ್ ಶಂಕರ್, ಎಸ್ ಪಿ, ಯಾದಗಿರಿ ಜಿಲ್ಲೆ, ಶಿವಾಂಶು ರಾಜಪೂತ್, ಎಸ್ ಪಿ, ರಾಜ್ಯ ಅಪರಾಧ ದಾಖಲೆ ವಿಭಾಗಕ್ಕೆ ವರ್ಗಾವಣೆಯಾದ ಅಧಿಕಾರಿಗಳಾಗಿದ್ದಾರೆ.

 

Share This Article
error: Content is protected !!
";