ಜಾತಿಗಣತಿ ಸಮೀಕ್ಷೆಗೆ ಉತ್ತಮ ಸಹಕಾರ-ಸುಕನ್ಯಾ ರಾಜಣ್ಣ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಾತಿ ಸಮೀಕ್ಷೆಯ ಮುಖ್ಯ ಉದ್ದೇಶ ಬಡವರ ಆರ್ಥಿಕ
, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವರಿಗೆ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸುವ ಉದ್ದೇಶದಿಂದ ಸಮೀಕ್ಷೆ ಮಾಡಲಾಗುತ್ತಿದ್ದು ನಿಮ್ಮ ಜಾತಿ, ಉಪಜಾತಿ, ಆರ್ಥಿಕ ಸ್ಥಿತಿ, ಉದ್ಯೋಗ, ಭೂ ಮಾಲೀಕತ್ವ ಮತ್ತು ಸಾಮಾಜಿಕ ತಾರತಮ್ಯದಂತಹ ಮಾಹಿತಿ ಸಂಗ್ರಹಿಸುತ್ತದೆ ಎಂದು ಗಣತಿದಾರ ಶಿಕ್ಷಕಿ ಸುಕನ್ಯಾ ಮನವರಿಕೆ ಮಾಡಿಕೊಟ್ಟರು.

ಅವರು ಚಿತ್ರದುರ್ಗ ನಗರದ ಕೆಹೆಚ್ ಬಿ ಕಾಲೋನಿಯ 3ನೇ ಹಂತದಲ್ಲಿ ಸಮೀಕ್ಷೆ ಕಾರ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಮಾಹಿತಿ ನೀಡುವಂತೆ ಕೋರಿ ಮಾತನಾಡಿದರು.

- Advertisement - 

ಸರ್ಕಾರ ಗಣತಿ ಮಾಡುವ ಮೂಲಕ ಅಭಿವೃದ್ಧಿ ಹೊಂದದ ಸಮುದಾಯಗಳಿಗೆ ಸಹಾಯ ಮಾಡಲು ಮತ್ತು ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ನೀಡುವಂತ ಕಾರ್ಯಗಳನ್ನು ಮಾಡಲು ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಅಧ್ಯಯನ ಮಾಡುವುದರಿಂದ ಬಡವರ ಆರ್ಥಿಕ ಮತ್ತು ಶೈಕ್ಷಣಿಕ ಪರಿಸ್ಥಿತಿ ಗಮನಿಸಿ ಅವರಿಗೆ ನೆರವು ನೀಡಲು ಸಮೀಕ್ಷೆ ಸಹಾಯ ಮಾಡುತ್ತದೆ.

- Advertisement - 

ಜಾತಿ, ಧರ್ಮ ಭೇದವಿಲ್ಲದೆ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಿ ಸಶಕ್ತ ಕರ್ನಾಟಕ ನಿರ್ಮಿಸುವುದು ಇದರ ಗುರಿಯಾಗಿದೆ ಎಂದು ಶಿಕ್ಷಕಿ ಸುಕನ್ಯಾ ತಿಳಿಸಿದರು.

ಅರ್ಹರಿಗೆ ಸವಲತ್ತು: ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು, ಸಾಮಾಜಿಕ ತಾರತಮ್ಯಕ್ಕೆ ಒಳಗಾದವರಿಗೆ ನೆರವಾಗಲು  ಸಮೀಕ್ಷೆ ಮುಖ್ಯವಾಗಿದೆ. ಸಮೀಕ್ಷೆ ಸಂದರ್ಭದಲ್ಲಿ 60 ಪ್ರಶ್ನೆಗಳಿಗೆ ಮಾಹಿತಿ ನೀಡಬೇಕು ಎಂದು ಅವರು ಮನವಿ ಮಾಡಿದರು.

ಪ್ರತಿ ಬ್ಲಾಕ್‌ಗೆ ಒಬ್ಬ ಶಿಕ್ಷಕರನ್ನು ನೇಮಿಸಿ ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಾಗುತ್ತಿದ್ದು ಸೆಪ್ಟೆಂಬರ್-29 ರಿಂದ ನಮಗೆ ಆದೇಶ ನೀಡಿ ಸಮೀಕ್ಷೆ ಮಾಡುವಂತೆ ಜಿಲ್ಲಾಡಳಿತ ಸೂಚನೆ ನೀಡಿತ್ತು. ಸರ್ಕಾರದ ಸೂಚನೆ ಮೇರೆಗೆ 22 ಕುಟುಂಬಗಳ ಸಮಗ್ರ ಮಾಹಿತಿಯೊಂದಿಗೆ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿದ್ದೇನೆ.

ಉಳಿದ ಮನೆಗಳ ಸಮೀಕ್ಷೆ ಕಾರ್ಯವನ್ನು ಮುಂದಿನ ಎರಡು ಮೂರು ದಿನಗಳಲ್ಲಿ ಪೂರ್ಣಗೊಳಿಸಬೇಕು ಎನ್ನುವ ಉದ್ದೇಶವಿದೆ. ಅಲ್ಲದೆ ಇಲ್ಲಿಯತನಕ 22ಕ್ಕೂ ಹೆಚ್ಚಿನ ಕುಟುಂಬಗಳ ಸಮೀಕ್ಷೆ ಮಾಡಿದ್ದು ತುಂಬಾ ಸಹಕಾರ ನೀಡಿ ಮಾಹಿತಿ ಒದಗಿಸುತ್ತಿದ್ದಾರೆಂದು ಶಿಕ್ಷಕಿ ಸುಕನ್ಯಾ ರಾಜಣ್ಣ ಅವರು ಮೆಚ್ಚುಗೆ ವ್ಯಕ್ತಪಡಿಸಿ ಸಾರ್ವಜನಿಕರಿಗೆ ಧನ್ಯವಾದಗಳನ್ನು ಹೇಳಿದರು.

ಕುಟುಂಬಗಳ ಸಮೀಕ್ಷೆ ಸಂದರ್ಭದಲ್ಲಿ ನೆಟ್ ವರ್ಕ್ ಸಮಸ್ಯೆ ಎದುರಾಗುತ್ತದೆ. ಬಹಳ ಸಮಯದ ತನಕ ನೆಟ್ ವರ್ಕ್ ಸುತ್ತುತ್ತಿರುತ್ತದೆ. ಇದರಿಂದ ಒಂದಿಷ್ಟು ವಿಳಂಬ ಆದರೂ ದತ್ತಾಂಶ ಸಂಗ್ರಹದಲ್ಲಿ ಯಾವುದೇ ಸಮಸ್ಯೆ ಆಗುತ್ತಿಲ್ಲ ಎಂದು ಪತ್ರಿಕೆ ಅವರು ಸ್ಪಷ್ಟಪಡಿಸಿದರು.

ಆಧಾರ್/ ಪಡಿತರ ಚೀಟಿ ನೀಡಿ ನೋಂದಣಿ ಮಾಡಿಕೊಂಡ ನಂತರ ವೈಯಕ್ತಿಕ ಮತ್ತು ಕುಟುಂಬದ ವಿವರಗಳನ್ನು ಪಡೆಯಲಾಗುತ್ತದೆ. ಆಧಾರ್ ಲಿಂಕ್ ಆಗಿರುವ ಮೊಬೈಲ್ ಗೆ ಒಟಿಪಿ ಬರುತ್ತದೆ. ಇದರಿಂದ ಕುಟುಂಬದ ಮಾಹಿತಿ ಕಲೆಹಾಕಲು ಆ್ಯಪ್‌ನಲ್ಲಿ ಅವಕಾಶವಿದ್ದು ಉತ್ತಮ ರೀತಿಯಲ್ಲಿ ಸಮೀಕ್ಷೆ ನಡೆಯುತ್ತಿದೆ ಎಂದು ಗಣತಿದಾರ ಶಿಕ್ಷಕಿ ಸುಕನ್ಯಾ ತಿಳಿಸಿದರು.

ಈ ಸಂದರ್ಭದಲ್ಲಿ ಗಣತಿದಾರರಾದ ಪತ್ನಿ ಸುಕನ್ಯಾ ಕಾರ್ಯಕ್ಕೆ ಪತಿ ಕೆ.ರಾಜಣ್ಣ ಸಾಥ್ ನೀಡುತ್ತಿದ್ದು ಅವರೂ ಕೂಡ ಗಣತಿ ಕಾರ್ಯದ ಭಾಗವಾಗಿ ಸಹಕರಿಸುತ್ತಿದ್ದಾರೆ.
90 ವರ್ಷಕ್ಕಿಂತ ಹೆಚ್ಚು ವಯಸ್ಸಿನ ವಯೋವೃದ್ಧೆ ಕರಿಯಮ್ಮ, ಎನ್.ಕೆ ಅನಿತಾ ಅವರು ಕುಟುಂಬದ ಮಾಹಿತಿ ನೀಡಿ ಸಹಕರಿಸಿದರು.

 

 

Share This Article
error: Content is protected !!
";