ವಿಎಸ್ಎಸ್ಎನ್ ಅಧ್ಯಕ್ಷರಾಗಿ ಮಾರಹಳ್ಳಿ ನಂದೀಶ್, ಉಪಾಧ್ಯಕ್ಷರಾಗಿ ಸುಮಾ ಅವಿರೋಧ ಆಯ್ಕೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ತೂಬಗೆರೆ ಹೋಬಳಿ ಗೆಂಟಗಾನಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ನಂದೀಶ ಮಾರಹಳ್ಳಿ
  ಉಪಾಧ್ಯಕ್ಷರಾಗಿ ಶ್ರೀಮತಿ ಸುಮಾ ದೇವರಾಜ್ ಅವಿರೋಧ  ಆಯ್ಕೆಯಾಗಿದ್ದಾರೆ.

ಆಯ್ಕೆಯಾದ ಅಧ್ಯಕ್ಷರು ಉಪಾಧ್ಯಕ್ಷರು ಹಾಗು ನಿರ್ದೆಶಕರುಗಳನ್ನು ಗಳಿಗೆ ಶುಭಕೋರಿ ಮಾತನಾಡಿದ ರಾಜ್ಯ ತೆಂಗು ನಾರು ಅಭಿವೃದ್ಧಿ   ಮಂಡಳಿಯ ಅಧ್ಯಕ್ಷ  ವೆಂಕಟೇಶ ಬಾಬು ಮಾಜಿ ಜಿಲ್ಲಾ ಪಂ ಸದಸ್ಯ ಕುರವಿಗೆರೆ ನರಸಿಂಹಯ್ಯ

ಪಿ ಎಲ್ ಡಿ ಬ್ಯಾಂಕ್ ನ ನಿರ್ದೇಶಕ ಹನುಮಪ್ಪ ತೂಬಗೆರೆ ಹೋಬಳಿ ಜೆಡಿಎಸ್ ಅಧ್ಯಕ್ಷರಾದ ಜಗನ್ನಾಥ ಚಾರ್, ಯುವ ಜೆಡಿಎಸ್ ಹೋಬಳಿ ಅಧ್ಯಕ್ಷ  ಮುರಳಿ. ಮೇಳೆಕೋಟೆ ಗ್ರಾ ಪಂ ಅಧ್ಯಕ್ಷ ಶ್ರೀನಿವಾಸ್, ಹಾಡೋನಹಳ್ಳಿ ಗ್ರಾ ಪಂ ಅಧ್ಯಕ್ಷ ಪುರುಷೋತ್ತಮ್, ಮಾಜಿ ಅಧ್ಯಕ್ಷ ಹಚ್ ಎ.ನಾಗರಾಜ್, ಹಾಡೋನಹಳ್ಳಿ ವಿ ಎಸ್ ಎಸ್ ಎನ್ ಅಧ್ಯಕ್ಷ ಮುನೇಗೌಡ, ಜೆಡಿಎಸ್ ಮುಖಂಡರಾದ ಮುದ್ದುಕೃಷ್ಣಪ್ಪ, ಮಂಜುನಾಥ ಶಟ್ಟರ್, ಸೀನಪ್ಪ, ನಿರ್ದೇಶಕರುಗಳಾದ ಗೌರೀಶ್, ಯಶ್ವಂತ್, ಶ್ರೀನಿವಾಸ್, ರಾಮಣ್ಣ, ಹನುಮಂತಪ್ಪ ಹಾಗು ಜೆಡಿಎಸ್ ಮುಖಂಡರು ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ  ಗೆಂಟಗಾನಹಳ್ಳಿ ವಿ ಎಸ್ ಎಸ್ ಎನ್ ನಿರ್ದೇಶಕರು ಹಾಗು ಗ್ರಾಮಸ್ದರು ಹಾಜರಿದ್ದರು.

Share This Article
error: Content is protected !!
";