ಬೇಸಿಗೆ ಬಿರು ಬಿಸಿಲಿಗೆ ಕೃಷಿಕರ ಸ್ಥಿತಿ ಊಹಿಸಲು ಅಸಾಧ್ಯ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈತ ಕಾಳಜಿಯ ಮಾತು ಹಾಗಿರಲಿ
, ರೈತರನ್ನು ಶೋಷಿಸಿದ್ದೇ ಹೆಚ್ಚು. ರೈತರು ಉಪಟಳ, ಉಪದ್ರವ ನಿರಂತರ ಅನುಭವಿಸುತ್ತಲೇ ಇದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪ ಮಾಡಿದ್ದಾರೆ.

- Advertisement - 

ಇದೀಗ ಗಡಿ ಜಿಲ್ಲೆ ಚಾಮರಾಜನಗರದ ಹನೂರು ತಾಲ್ಲೂಕಿನ ಕೆಲ ಗ್ರಾಮದ ರೈತರು ವಿದ್ಯುತ್ ಅಡಚಣೆಯಿಂದ ರೋಸಿ ಹೋಗಿ ಸೆಸ್ಕ್  ಅಧಿಕಾರಿಗಳಿಗೆ ದಿಗ್ಬಂಧನ ಮಾಡಿ ತಮ್ಮ ಆಕ್ರೋಶಭರಿತ ಆಕ್ರಂದನ ವ್ಯಕ್ತಪಡಿಸಿದ್ದಾರೆ.

- Advertisement - 

ಬಿರು ಬೇಸಿಗೆ ತಾಪ ಆರಂಭದಲ್ಲೇ ಜನರನ್ನು ಹೈರಾಣಾಗಿಸುತ್ತಿದೆ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಯಾವ ಮಟ್ಟಕ್ಕೆ ತಲುಪಬಹುದು ಎಂಬ ಆತಂಕ ಎಲ್ಲರನ್ನೂ ಕಾಡುತ್ತಿದೆ, ಅದರಲ್ಲೂ ಕೃಷಿಕರ ಸ್ಥಿತಿ ಊಹಿಸಲು ಅಸಾಧ್ಯ ಪರಿಸ್ಥಿತಿ ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ರೈತರು ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ವಿದ್ಯುತ್ ಆಶ್ರಯಿಸುವುದನ್ನು ಬಿಟ್ಟು ಪರ್ಯಾಯ ಮಾರ್ಗ ಇಲ್ಲವೇ ಇಲ್ಲ. ಆದರೆ ಈಗಲೇ ರೈತರಿಗೆ ವಿದ್ಯುತ್ ಅಡಚಣೆ ಸರಿಪಡಿಸುವಲ್ಲಿ ತಾತ್ಸಾರ ಧೋರಣೆ ಪ್ರಾರಂಭಿಸಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ತನ್ನ ಆಂತರಿಕ ಕಚ್ಚಾಟದಿಂದ ಹೊರಗೆ ಬಂದು ಜನರ ಸಂಕಷ್ಟವನ್ನು ಗಮನಿಸುತ್ತಿಲ್ಲ, ನಿವೇದನೆಗಳನ್ನು ಆಲಿಸುತ್ತಿಲ್ಲ ಎಂದು ವಿಜಯೇಂದ್ರ ಕಿಡಿ ಕಾರಿದ್ದಾರೆ.

- Advertisement - 

ಪರಿಸ್ಥಿತಿಯ ಭೀಕರತೆ ನಿಯಂತ್ರಣಕ್ಕೆ ತರಲಾರದಷ್ಟು ಉಲ್ಬಣಿಸುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳದೆ ಹೋದರೆ ಘನಘೋರ ಪರಿಸ್ಥಿತಿ ಬೇಸಿಗೆಯ ಸಂದರ್ಭದಲ್ಲಿ ನಿರ್ಮಾಣವಾದರೆ ಅದರ ಹೊಣೆಯನ್ನು ಸರ್ಕಾರ ಪರಿಸರದ ಮೇಲೆ ಹೊರಿಸಿ ಕೈ ತೊಳೆದುಕೊಳ್ಳಲು ಸಾಧ್ಯವೇ ಇಲ್ಲ, ಈ ಕೂಡಲೇ ಬೇಸಿಗೆಯ ತಿಂಗಳುಗಳಲ್ಲಿ ಎದುರಾಗ ಬಹುದಾದ ಪರಿಸ್ಥಿತಿಯನ್ನು ಅಂದಾಜಿಸಿ ಕುಡಿಯುವ ನೀರು, ವಿದ್ಯುತ್ ಪೂರೈಕೆ ಹಾಗೂ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕದಂತೆ ಎಲ್ಲ ರೀತಿಯ ನೆರವು ನೀಡಲು ಸರ್ಕಾರ ಮುಂದಾಗಬೇಕು. ಜನರು ಬವಣೆಯ ಬಲೆಯಲ್ಲಿ ಸಿಲುಕದಂತೆ ಮುಂದಾಲೋಚನೆಯ ಯೋಜನೆಯನ್ನು ರೂಪಿಸಿ ಈ ಕ್ಷಣದಿಂದಲೇ ಕಾರ್ಯಪ್ರವೃತ್ತರಾಗುವಂತೆ ವಿಜಯೇಂದ್ರ ಒತ್ತಾಯಿಸಿದ್ದಾರೆ.

 

Share This Article
error: Content is protected !!
";