ಟೀಚರಮ್ಮ ಒಂದು ಮುತ್ತುಕೊಟ್ಟರೆ 50 ಸಾವಿರ ರೂ.ಕೊಡಬೇಕು! ಇದೂ ಒಂಥರ ಹನಿಟ್ರ್ಯಾಪ್?

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಲ್ಲಿ ಅಧಿಕಾರ ಉಳಿಸಿಕೊಳ್ಳಲು ಪಡೆದುಕೊಳ್ಳಲು ಹನಿಟ್ರ್ಯಾಪ್ ಮಾಡಿದರೆ ಜ್ಞಾನ ದೇಗುಲದ(ಪ್ರಿ ಸ್ಕೂಲ್) ಟೀಚರಮ್ಮ ಒಂದು ಮುತ್ತು ಕೊಟ್ಟರೆ 50 ಸಾವಿರ ರೂ. ಕೊಡಬೇಕು. ಅಧಿಕಾರ, ಅಂತಸ್ತು, ದುಡ್ಡಿಗಾಗಿ ಈಗ ಸುಲಭ ಮಾರ್ಗೋಪಾಯ ಎಂದರೆ ಹನಿಟ್ರ್ಯಾಪ್ ಮಾಡುವುದು.

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್​ನಲ್ಲಿ ಖಾಸಗಿ ಪ್ರಿ ಸ್ಕೂಲ್ ನಡೆಸುತ್ತಿದ್ದ ಟೀಚರ್ ಶ್ರೀದೇವಿ ರುಡಿಗಿ ಎಂಬಾಕೆ ಶಾಲೆಗೆ ಮಕ್ಕಳನ್ನು ಕರೆತರುತ್ತಿದ್ದ ಮಕ್ಕಳೊಬ್ಬರ ತಂದೆಗೆ ಮುತ್ತು ಕೊಟ್ಟು 50 ಸಾವಿರ ರೂ.ಪಡೆದಿದ್ದಲ್ಲದೆ ಭಾರೀ ಹಣಕ್ಕೆ ಬೇಡಿಕೆ ಇಟ್ಟು ಹನಿಟ್ರ್ಯಾಪ್ ಎಸಗಿದ ಶಿಕ್ಷಕಿ ಶ್ರೀದೇವಿ ರುಡಿಗಿ ಮತ್ತು ಆಕೆಯ ಇಬ್ಬರು ಸ್ನೇಹಿತರು ಈಗ ಕಂಬಿ ಎಣಿಸುತ್ತಿದ್ದಾರೆ.
ಪ್ರಿ ಸ್ಕೂಲ್​ಗೆ ಬರುತ್ತಿದ್ದ ಮಕ್ಕಳ ತಂದೆಗೆ ಮುತ್ತು ಕೊಟ್ಟು ಹನಿಟ್ರ್ಯಾಪ್ ಮಾಡಿದ್ದಲ್ಲದೆ
, 50 ಸಾವಿರ ರೂ. ಸುಲಿಗೆ ಮಾಡಿದ್ದಾಳೆ. ಮತ್ತೆ ಬೆದರಿಕೆಯೊಡ್ಡಿ ಒಂದು ಲಕ್ಷ ರೂಪಾಯಿಗೂ ಹೆಚ್ಚು ಹಣ ವಸೂಲಿ ಮಾಡಿದ್ದಲ್ಲದೆ, ಲಕ್ಷಾಂತರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಮತ್ತಷ್ಟು ಹಣ ವಸೂಲಿ ಮಾಡಲು ಮುಂದಾದ ಟೀಚರ್ ಹಾಗೂ ಗ್ಯಾಂಗ್ ಈಗ ಪೊಲೀಸ್ ಬಲೆಗೆ ಬಿದ್ದಿದೆ.

 ಶಿಕ್ಷಕಿಯ ಹನಿಟ್ರ್ಯಾಪ್ ಬಲೆಗೆ ಬಿದ್ದ ಪೋಷಕ ಆರೋಪಿ ಶಿಕ್ಷಕಿ ಶ್ರೀದೇವಿ ರುಡಿಗಿಗೆ 2023 ರಲ್ಲಿ ರಾಕೇಶ್ ಎಂಬ ಮಗುವಿನ ತಂದೆ ರಾಕೇಶ್ ಪರಿಚಯವಾಗಿತ್ತು. ಶಾಲೆ ನಿರ್ವಹಣೆ, ತಂದೆಯ ಚಿಕಿತ್ಸೆಗೆಂದು ಶ್ರೀದೇವಿ 2024ರ ಮಾರ್ಚ್​ನಲ್ಲಿ ವಾಪಸ್ ಕೊಡುವುದಾಗಿ ತಿಳಿಸಿ ರಾಕೇಶ್​​ನಿಂದ 4 ಲಕ್ಷ ರೂ. ಸಾಲ ಪಡೆದಿದ್ದಳು.  ರಾಕೇಶ್ ಕೊಟ್ಟ ಹಣ ವಾಪಸ್ ಕೇಳಿದಾಗ ಕೊಡದೇ ತುಂಬಾ ಕಷ್ಟವಿದೆ. ಈಗ ಹಣ ಕೊಡಲು ಆಗುವುದಿಲ್ಲ. ನೀವು ಶಾಲೆಯ ಪಾರ್ಟನರ್ ಆಗಿ ಎಂದು ಆಹ್ವಾನಿಸಿದ್ದಳು.
ಇದರ ಮಧ್ಯ ಶಿಕ್ಷಕಿ ಶ್ರೀದೇವಿ ಮತ್ತು ರಾಕೇಶ್ ಇಬ್ಬರ ನಡುವೆ ಸಲುಗೆ ಬೆಳೆದಿದೆ. ಇಬ್ಬರೂ ಜತೆಯಾಗಿ ಸುತ್ತಾಟ ನಡೆಸಿದ್ದಾರೆ. ಶ್ರೀದೇವಿ‌ಜೊತೆ ಮಾತನಾಡಲೆಂದೇ ರಾಕೇಶ್ ಬೇರೊಂದು ಸಿಮ್ ಹಾಗೂ ಪೋನ್ ಖರೀದಿಸಿ ಮಾತುಕಥೆ ಮಾಡುತ್ತಿದ್ದರು.

ಹೀಗೆ ಸ್ವಲ್ಪ ದಿನ ಆದ ಮೇಲೆ ಜನವರಿ ಮೊದಲ ವಾರದಲ್ಲಿ ಹಣ ವಾಪಸ್ ಕೊಡುವಂತೆ ಶ್ರೀದೇವಿಗೆ ರಾಕೇಶ್ ಒತ್ತಾಯ ಮಾಡಿದ್ದರು. ಆಗ ನಿನ್ನ ಜೊತೆ ರಿಲೇಶನ್ ಶಿಪ್​​ನಲ್ಲಿ ಇರುತ್ತೇನೆ ಎಂದು ಶ್ರೀದೇವಿ ಹೇಳಿದ್ದಲ್ಲದೆ 15 ಲಕ್ಷ ರೂ. ಹಣ ಕೇಳಿದ್ದಳು. ಇದಕ್ಕೆ ರಾಕೇಶ್ ಒಪ್ಪಿರಲಿಲ್ಲ ಎನ್ನಲಾಗಿದೆ.
ಒಂದು ಮುತ್ತಿಗೆ 50 ಸಾವಿರ ರೂ!

ಶಿಕ್ಷಕಿ ಶ್ರೀದೇವಿ ಅವರು ರಾಕೇಶ್ ಮನೆಗೆ ತೆರಳಿ ಒಂದು ಮುತ್ತು ಕೊಟ್ಟಿದ್ದಳು. ಬಳಿಕ ಬ್ಲ್ಯಾಕ್​ ಮೇಲ್ ಮಾಡಿ 50 ಸಾವಿರ ರೂ. ಪಡೆದಿದ್ದಳು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆ ಬಳಿಕ, ಪದೇ ಪದೇ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಆಕೆ ಜತೆ ರಾಕೇಶ್ ಸಂಪರ್ಕಕ್ಕೆ ಇಟ್ಟುಕೊಂಡಿದ್ದ ಸಿಮ್ ಕಾರ್ಡ್ ಮುರಿದು ಬಿಸಾಡಿ ಶ್ರೀದೇವಿ ಜತೆ ಸಂಪರ್ಕ ಕಳೆದುಕೊಂದ್ದ ರಾಕೇಶ್.

ಇದರ ಮಧ್ಯ ಮಾರ್ಚ್ 12 ರಂದು ರಾಕೇಶ್ ಪತ್ನಿಗೆ ಶ್ರೀದೇವಿ ಕರೆ ಮಾಡಿ, ಮಕ್ಕಳ ಸ್ಕೂಲ್ ಟಿಸಿ ಕಳುಹಿಸಿಕೊಡುತ್ತೇನೆ, ನಿಮ್ಮ ಪತಿಯನ್ನು ಕಳುಹಿಸಿ ಎಂದಿದ್ದಳು. ಅದರಂತೆ ಶ್ರೀದೇವಿಯ ಪ್ರಿ ಸ್ಕೂಲ್​​ಗೆ ರಾಕೇಶ್ ತೆರಳಿದ್ದರು. ಆ ಸಂದರ್ಭದಲ್ಲಿ ಶ್ರೀದೇವಿ ಜೊತೆ ಹಾಜರಿದ್ದ ಸ್ನೇಹಿತ ಆರೋಪಿಗಳಾದ ಸಾಗರ್ ಹಾಗೂ ಗಣೇಶ್ ಎಂಬಿಬ್ಬರು ರಾಕೇಶ್ ಗೆ ಬೆದರಿಕೆ ಹಾಕಿದ್ದರು.

ಸಾಗರ್ ಜೊತೆ ಶ್ರೀದೇವಿಗೆ ನಿಶ್ಚಿತಾರ್ಥ ಆಗಿದೆ. ಆದರೆ ನೀನು ಆಕೆ ಜೊತೆ ಮಜಾ ಮಾಡುತ್ತಿದ್ದಿಯಾ ಎಂದು ಆರೋಪಿ ಗಣೇಶ್ ಬೆದರಿಕೆ ಹಾಕಿ ಕಾರಿನಲ್ಲಿ‌ಕೂರಿಸಿಕೊಂಡು, ಯಾರಿಗೂ ವಿಚಾರ ಹೇಳಬಾರದು ಎಂದರೆ 1 ಕೋಟಿ‌ರೂ. ಕೊಡು ಎಂದು ಬ್ಲ್ಯಾಕ್​ಮೇಲ್ ಮಾಡಿದ್ದ. ಕೊನೆಯದಾಗಿ ಆರೋಪಿಗಳು 20 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. 1.90 ಲಕ್ಷ ರೂ. ಹಣ ಪಡೆದು ಬಿಟ್ಟು ಕಳುಹಿಸಿದ್ದರು. ಉಳಿದ ಹಣ ನೀಡುವಂತೆ ಪ್ರಾಣ ಬೆದರಿಕೆ ಹಾಕಿದ್ದರಿಂದ ರಾಕೇಶ್ ಆರೋಪಿಗಳ ವಿರುದ್ಧ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ.

ರಾಕೇಶ್ ನೀಡಿದ ದೂರಿನನ್ವಯ ಶ್ರೀದೇವಿ, ಅರುಣ್ ಮತ್ತು ಸಾಗರ್ ಎನ್ನುವ ಮೂರು ಆರೋಪಿಗಳರನ್ನು ಸಿಸಿಬಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಸದ್ಯ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿರುವ ಮೂವರು ಆರೋಪಿಗಳು ವಿಜಯಪುರ ಮೂಲದವರು ಎನ್ನಲಾಗಿದೆ.

 

 

Share This Article
error: Content is protected !!
";