ಬೆಲೆ ಏರಿಸಿ, ಕರ್ನಾಟಕದ ಜನರನ್ನು ನಿರಂತರವಾಗಿ ದರೋಡೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕಾಂಗ್ರೆಸ್ ಸರ್ಕಾರ ಬೆಲೆ ಏರಿಸಿ, ಕರ್ನಾಟಕದ ಜನರನ್ನು ನಿರಂತರವಾಗಿ ದರೋಡೆ ಮಾಡುತ್ತಿದೆ, ಮತ್ತೊಂದು ಕಡೆ ಕಾನೂನಿನ ಭಯವಿಲ್ಲದೇ ದರೋಡೆಕೋರರು ಹಗಲು ಹೊತ್ತಿನಲ್ಲೇ ಬ್ಯಾಂಕ್‌ಗಳು, ಎಟಿಎಂ ವಾಹನಗಳನ್ನು ರಾಬರಿ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಗಂಭೀಪ ಆರೋಪ ಮಾಡಿದೆ.

ಅಕ್ಟೋಬರ್ 2024 : ದಾವಣಗೆರೆಯ ನ್ಯಾಮತಿಯಲ್ಲಿ SBI ಬ್ಯಾಂಕ್ ದರೋಡೆ. ಜನವರಿ 2025 : ಬೀದರ್‌ನಲ್ಲಿ ಎಟಿಎಂಗೆ ಹಣ ಸಾಗಿಸುವ ವಾಹನ ದರೋಡೆ. ಜನವರಿ 2025 : ಮಂಗಳೂರಿನ ಕೋಟೆಕಾರು ಸಹಕಾರಿ ಬ್ಯಾಂಕ್‌ದರೋಡೆ.

- Advertisement - 

ಏಪ್ರಿಲ್‌2025 : ಕಲಬುರಗಿಯಲ್ಲಿ ಎಟಿಎಂ ಯಂತ್ರ ಧ್ವಂಸಗೊಳಿಸಿ ದರೋಡೆ.
ಮೇ 2025 : ವಿಜಯಪುರದ ಮನಗೂಳಿಯಲ್ಲಿ ಕೆನರಾ ಬ್ಯಾಂಕ್ ದರೋಡೆ. ಸೆಪ್ಟೆಂಬರ್ 2025 : ವಿಜಯಪುರದ ಚಡಚಣದಲ್ಲಿ
SBI ಬ್ಯಾಂಕ್ ದರೋಡೆ

19, ನವೆಂಬರ್‌2025 : ಬೆಂಗಳೂರಿನ ಡೈರಿ ಸರ್ಕಲ್‌ಮೇಲ್ಸೇತುವೆ ಬಳಿ ಎಟಿಎಂಗೆ ಹಣ ತುಂಬುವ ವಾಹನ ದರೋಡೆ.

- Advertisement - 

ಗೃಹ ಸಚಿವ ಡಾ.ಜಿ.ಪರಮೇಶ್ವರ ನಿಷ್ಪ್ರಯೋಜಕ ಎಂಬುದಕ್ಕೆ ಇದಕ್ಕಿಂತ ನಿದರ್ಶನ ಬೇರೆ ಬೇಕಿಲ್ಲ. ಸಿದ್ದರಾಮಯ್ಯ ಅವರ ಅರಾಜಕತೆಯಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ದರೋಡೆಕೋರರು, ಕಳ್ಳಕಾಕರ ಅಟ್ಟಹಾಸ ಮಿತಿಮೀರಿದೆ ಎಂದು ಜೆಡಿಎಸ್ ಟೀಕಿಸಿದೆ. 

 

 

Share This Article
error: Content is protected !!
";