ಯುಗಾದಿ ಹಬ್ಬಕ್ಕೆ ಬೆಲ್ಲದ ಬದಲು ಬೇವು ಕೊಟ್ಟ ಕಾಂಗ್ರೆಸ್‌ಸರ್ಕಾರ !

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಯುಗಾದಿ ಹಬ್ಬಕ್ಕೆ ಬೆಲ್ಲದ ಬದಲು ಬೇವು ಕೊಟ್ಟ ಕಾಂಗ್ರೆಸ್‌ಸರ್ಕಾರ ! ಎಂದು ಜೆಡಿಎಸ್ ಹರಿಹಾಯ್ದಿದೆ.
ಜನವಿರೋಧಿ ಕರ್ನಾಟಕ ಕಾಂಗ್ರೆಸ್
ಸರ್ಕಾರಕ್ಕೆ ಧಿಕ್ಕಾರ ! ,

ನಂದಿನ ಹಾಲು, ಮೊಸರು ಲೀಟರ್‌ಗೆ 4 ದರ ಏರಿಸಿದ ಬೆನ್ನಲ್ಲೇ ವಿದ್ಯುತ್‌ದರವನ್ನು ಪ್ರತಿ ಯುನಿಟ್‌ಗೆ 36 ಪೈಸೆ ಹೆಚ್ಚಳ ಮಾಡಿರುವ, ಜನವಿರೋಧಿ ಸಿದ್ದರಾಮಯ್ಯ ಸರ್ಕಾರ ಬಡ ಜನರ ಹೊಟ್ಟೆಯ ಮೇಲೆ ಹೊಡೆದಿದೆ ಎಂದು ಜೆಡಿಎಸ್ ದೂರಿದೆ.  

ವಿದ್ಯುತ್‌ಯುನಿಟ್‌ಗೆ 36 ಪೈಸೆ ಹೆಚ್ಚಳ, ಹಾಲಿನ ದರ ಲೀ. 4 ಏರಿಕೆ, ಮೊಸರಿನ ದರ ಲೀ. 4 ಏರಿಕೆ, ಬಸ್, ಮೆಟ್ರೋ , ನೀರು ಸೇರಿದಂತೆ ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರಿಗೆ, ಕಾಂಗ್ರೆಸ್‌ಸರ್ಕಾರ ಹಾಲು, ಮೊಸರು ಮತ್ತು ವಿದ್ಯುತ್‌ದರವನ್ನು  ಒಟ್ಟೊಟ್ಟಿಗೆ ಏರಿಸಿ ಯುಗಾದಿ ಹಬ್ಬಕ್ಕೆ ಬೆಲ್ಲದ ಬದಲು ಬೇವನ್ನು ಊಡುಗೊರೆಯಾಗಿ ನೀಡಿದೆ ಎಂದು ಜೆಡಿಎಸ್ ಹರಿಹಾಯ್ದಿದೆ.

 

 

Share This Article
error: Content is protected !!
";