ಭ್ರಷ್ಟಾಚಾರದಲ್ಲಿ ನಂಬರ್‌ ಆಗಿಸಿದ್ದೇ ಕಾಂಗ್ರೆಸ್ ಸರ್ಕಾರದ ಸಾಧನೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಜನರಿಗೆ ಸುಳ್ಳುಗಳ ಮೂಲಕ ಅಂಗೈನಲ್ಲಿ ಆಕಾಶ ತೋರಿಸಿ ಅಧಿಕಾರ ಹಿಡಿದ ಕರ್ನಾಟಕ ಕಾಂಗ್ರೆಸ್ ಪಕ್ಷ ನೀಡಿದ್ದ 134 ಭರವಸೆಗಳಲ್ಲಿ ಕಳೆದ 2.5 ವರ್ಷಗಳಲ್ಲಿ ಈಡೇರಿಸಿದ್ದು ಕೇವಲ 9 ಅಷ್ಟೇ ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.

ಕಾಂಗ್ರೆಸ್‌ಸರ್ಕಾರದ ಅವೈಜ್ಞಾನಿಕ ಗ್ಯಾರಂಟಿಗಳ ಹೊಡೆತಕ್ಕೆ ರಾಜ್ಯದ ಆರ್ಥಿಕ ಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಸರ್ಕಾರಿ ನೌಕರರಿಗೆ, ಪಾಲಿಕೆ ಸಿಬ್ಬಂದಿ, ಆಶಾ ಕಾರ್ಯಕರ್ತರಿಗೆ, ಶಿಕ್ಷಕರಿಗೆ ವೇತನ ನೀಡಲು ಸಹ ಸರ್ಕಾರ ಹೆಣಗಾಡುತ್ತಿದೆ. 

- Advertisement - 

“ವಚನ ಭ್ರಷ್ಟ ಕಾಂಗ್ರೆಸ್‌” ಕರ್ನಾಟಕವನ್ನು ಭ್ರಷ್ಟಾಚಾರದಲ್ಲಿ ನಂಬರ್‌ ಆಗಿಸಿದ್ದೇ 2.5 ವರ್ಷಗಳ ಸಾಧನೆಯಾಗಿದೆ. ಜಿಬಿಎ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸದೆ ರಾಜ್ಯದ ಜನರ ಹಕ್ಕನ್ನು ಕಸಿದಿರುವ ಕಾಂಗ್ರೆಸ್‌ಕೊಟ್ಟಿದ್ದ ಭರವಸೆಗಳನ್ನು ಕಾಲಮಿತಿಯಲ್ಲಿ ಈಡೇರಿಸುವಲ್ಲಿ ಸೋತಿದೆ ಎಂದು ಜೆಡಿಎಸ್ ಆರೋಪಿಸಿದೆ.

ಇಲಾಖೆಗಳಲ್ಲಿ 60% ಕಮಿಷನ್‌, ಲಂಚ, ಅಧಿಕಾರ ದಾಹ , ಕುರ್ಚಿ ಕಚ್ಚಾಟದಲ್ಲಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರು ಮುಳುಗಿಹೋಗಿದ್ದು, ಆಡಳಿತ ಯಂತ್ರ ಸಂಪೂರ್ಣ ನೆಲಕ್ಕಚ್ಚಿದೆ.

- Advertisement - 

ನೆರೆಹಾನಿ, ರೈತರ ಆತ್ಮಹತ್ಯೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ರಾಜ್ಯದ ಜನರಿಗೆ ಉತ್ತಮ ಆಡಳಿತ ನೀಡುವಲ್ಲಿ ಕಾಂಗ್ರೆಸ್‌ಸರ್ಕಾರ ವಿಫಲವಾಗಿದೆ ಎಂದು ಜೆಡಿಎಸ್ ದೂರಿದೆ.

Share This Article
error: Content is protected !!
";